ಗುಬ್ಬಿ ಹಲಸು ಮೇಳಕ್ಕೆ ರೈತರ ನೀರಸ ಪ್ರತಿಕ್ರಿಯೆ

ತೆಂಗು ಆಡಿಕೆಗಳಂತೆ ಪರಿಸರದ ನೀರನ್ನು ಖಾಲಿ ಮಾಡದೆ ಯಾವುದೇ ಆರೈಕೆಯಿಲ್ಲದೆ, ಗೊಬ್ಬರವಿಲ್ಲದೆ ಬೆಳೆಯುವ ಹಲಸು ರೈತನ ನಿಜವಾದ ಕಲ್ಪವೃಕ್ಷ, ಹಲಸಿನಿಂದ ತಯಾರಿಸಿದ ಪ್ರತಿಯೊಂದು ಪದಾರ್ಥವೂ ಮಾನವನ ಉಪಯೋಗಕ್ಕೆ ಬರುತದೆ, ಸೊಪ್ಪು ದನಗಳಿಗೆ ಹಾಗೂ ಮೇಕೆಗೆ ಆಹಾರವಾಗಿ ಬಳಕೆಯಾಗುತದೆ, ಇನ್ನು ಹಲಸಿನಿಂಧ ತಯಾರಾಗುವ ಹಪ್ಪಳ, ಸಂಡಿಗೆ, ಬೀಜದಿಂದ ಮಾಡುವ ತಿನಿಸುಗಳು ಆರೋಗ್ಯಕ್ಕೂ ಪೂರಕ, ರಾಸಾಯಿನಿಕ ರಹಿತವಾದ ಹಲಸು ಎಲ್ಲರಿಗೂ ಆರೋಗ್ಯಕರವಾದ ಹಣ್ಣಾದರೆ, ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ತರುವ ಇದು ರೈತನಿಗೆ ವರ ಎಂದರು.
ನೇರ ಮಾರಾಟ : ಹಲಸು ಬೆಳೆದ ರೈತನು ಇಂದು ಮಧ್ಯವರ್ತಿಗಳಿಂದ ಶೋಷಣೆಗೆ ಒಳಗಾಗುತ್ತಿದ್ದಾನೆ, ಕೊಬರಿ ಅಡಿಕೆಗೆ ಇದ್ದಹಾಗೆ ತೆಂಗಿಗೂ ಪ್ರತ್ಯೇಕವಾದ ಮಾರುಕಟ್ಟೆ ಸೌಲಭ್ಯವನ್ನು ಸರಕಾರ ಕಲ್ಪಿಸಬೇಕು, ಇದರಿಂದ ರೈತನು ತಾನು ಬೆಳೆದ ಹಲಸನ್ನು ನೇರವಾಗಿ ಮಾರಾಟ ಮಾಡಲು ಸಾಧ್ಯವಾಗುತ್ತದೆ ಹಾಗೆಯೇ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಹಲಸಿನ ಉತ್ಪನ್ನಗಳನ್ನು ತಯಾರಿಸುವುದಕ್ಕೆ ಆದ್ಯತೆ ಕೊಡಬೇಕು, ಸರಕಾರ ಸಾಲುಮರಗಳಲ್ಲಿ ಹಲಸಿನ ಮರಗಳನ್ನು ಬೆಳೆಸುವ ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಮೇಳವನ್ನು ಉದ್ಘಾಟಿಸಿ ಮತಾನಾಡಿದ ಜಿಲ್ಲಾ ತೋಟಗಾರಿಕಾ ನಿರ್ದೇಶಕ ದೇವರಾಜಪ್ಪ ಮಿಶ್ರ ಬೆಳೆಯಾಗಿ ಹಲಸನ್ನು ಬೆಳೆಸದೆ ಪ್ರತ್ಯೇಕವಾಗಿ ಹಲಸು ಬೆಳೆಯುವ ರೈತರಿಗೆ ಸರಕಾರದ ಸಹಾಯಧನವಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಆಯೋಜಕ ಸಾವಯುವ ಕೃಷಿಕ ಡಾ.ಜಿ.ಎಂ.ಪರಮಶಿವಯ್ಯ ಮಾತನಾಡಿ ಆರೋಗ್ಯಕರವಾದ ಹಲಸ್ನು ಬೆಳೆಯಲು ರೈತರಿಗೆ ಉತ್ತೇಜನ ಹಾಗೂ ಆರೋಗ್ಯಕರವಾದ ಹಲಸನ್ನು ಸೇವಿಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಹಲಸಿನ ಮೇಳವನನು ಹಮ್ಮಿಕೊಳ್ಳಲಾಗಿದೆ. ಸರಕಾರ ಹಲಸು ಬೆಳೆಯ ಮಾರಾಟಕ್ಕೆ ಪ್ರತ್ಯೇಕವಾದ ಸೌಲಭ್ಯಗಳನ್ನು ರೈತನಿಗೆ ಕಲ್ಪಿಸುವತ್ತ ಗಮನಹರಿಸಬೇಕು ಎಂದರು.
ಸಾವಯುವ ಕೃಷಿಕ ಗುರುಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದ ಮೇಳದಲ್ಲಿ ಬೈಫ್ ಸಂಸ್ಥೆಯ ನಿರ್ದೇಶಕ ವೈ.ಎ.ಠಾಕೂರ್, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೃಷಿ ವಿಶ್ವವಿದ್ಯಾಲಯದ ಸದಾಶಿವಪ್ಪ, ಶ್ಯಾಮಲಮ್ಮ ಪ್ರಾಂಶುಪಾಲ ನಾಗರಾಜು, ಮುಂತಾದವರು ಭಾಗವಹಿಸಿದ್ದರು. ಕಿಡಿನೇತ್ರ ಸ್ವಾಗತಿಸಿದರು. ಬೈಫ್ ಸಂಸ್ಥೆಯ ಆನಂದಕುಮಾರ್ ವಂದಿಸಿದರು. ಎಂ.ಎನ್.ಕುಲಕರ್ಣಿ ನಿರೂಪಿಸಿದರು.
ದುಬಾರಿ : ಕಳೆದ ವಾರ ತಿಪಟೂರಿನ ಬಿಳಿಗೆರೆಯಲ್ಲಿ ನಡೆದ ಎಳನೀರು ಮೇಳದಲ್ಲಿ ಇದೇ ಸಂಘಟನೆ ರೈತರ ನೆರವಿನಿಂದ ಕೇವಲ 5 ರೂಗೆ ಒಂದು ಎಳನೀರಿನಂತೆ ಮಾರಾಟದ ವ್ಯವಸ್ಥೆ ಮಾಡಿತ್ತು. ಆದರೆ ನಿಟ್ಟೂರನಲ್ಲಿ ನಡೆದ ಹಲಸಿನ ಮೇಳದಲ್ಲಿ ಬೆಂಗಳೂರಿಗಿಂತಲೂ ದುಬಾರಿ ದರದಲ್ಲಿ ಅಂದರೆ ಒಂದು ಹಲಸಿನ ತೊಳೆಗೆ 5 ರೂನಂತೆ ಮಾರಾಟ ಮಾಡಿದ್ದು ಮೇಳಕ್ಕೆ ಬಂದಿದ್ದ ಸಾರ್ವಜನಿಕರಿಗೆ ಬೇಸರ ತರಿಸಿತು. ಇದರ ಜತೆಗೆ ರಾಜ್ಯ ಮಟ್ಟದಲ್ಲಿ ಸುದ್ದಿ ಮಾಡಿದ ಆಯೋಜಕರು ಸ್ಥಳೀಯರನ್ನೇ ವಿಶ್ವಾಸ ತೆಗೆದುಕೊಳ್ಳದೆ ಮಾಡಿದ ಈ ಮೇಳದಲ್ಲಿ ನಿರೀಕ್ಷೆಯಷ್ಟು ರೈತರು ಭಾಗವಹಿಸಲೇ ಇಲ್ಲ. ಪ್ರತಿವಾರ ತಾಲೂಕಿನ ಚೇಳೂರಿನಲ್ಲಿ ನಡೆಯುವ ಸಂತೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಹಲಸಿನ ಹಣ್ಣು ಮಾರಾಟಕ್ಕೆ ಬಂದರೆ ಈ ಮೇಳದಲ್ಲಿ ಬಂದಿದ್ದು 300ರಿಂದ 400 ಹಲಸಿನಹಣ್ಣು ಮಾತ್ರ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications