ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಾಯುಕ್ತ ವಿರುದ್ಧ ಮಾನನಷ್ಟ ಮೊಕದ್ದಮೆ

By Staff
|
Google Oneindia Kannada News

Lokayukta Santosh Hegde
ಬೆಂಗಳೂರು, ಜೂ.7 : ಅಭಿಷೇಕ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾಯಮೂರ್ತಿ ತಮ್ಮ ಬಗ್ಗೆ ವೈಯಕ್ತಿಕ ಆಪಾದನೆ ಮಾಡಿದ್ದಾರೆ ಎಂದು ಆರೋಪಿಸಿಬಿಬಿಎಂಪಿ ಆಯುಕ್ತ ಡಾ.ಎಸ್. ಸುಬ್ರಹ್ಮಣ್ಯ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಲಿಂಗರಾಜಪುರ ಬಳಿಯ ಮಳೆ ನೀರಿನ ದೊಡ್ಡ ಮೋರಿಯಲ್ಲಿ ಮೇ.31 ರಂದು ಕೊಚ್ಚಿಹೋದ ಬಾಲಕ ಅಭಿಷೇಕ್‌ನ ಮನೆಗೆ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಇತ್ತೀಚೆಗೆ ತೆರಳಿ ಸಾಂತ್ವನ ಹೇಳಿದ್ದರು.

ಬಿಬಿಎಂಪಿ ಕಾರ್ಯ ವೈಖರಿಗೆ ಲೋಕಾಯುಕ್ತರು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ, ಲೋಕಾಯುಕ್ತರು ಇಡೀ ವ್ಯವಸ್ಥೆಯೊಂದನ್ನೇ ತರಾಟೆಗೆ ತೆಗೆದುಕೊಂಡಿಲ್ಲ. ತಮ್ಮ ವಿರುದ್ಧದೋಷಾರೋಪಣೆ ಮಾಡಿ ನೋವುಂಟು ಮಾಡಿದ್ದಾರೆ ಎಂದು ಬಿಬಿಎಂಪಿ ಆಯುಕ್ತರು 5 ನೇ ಎಸಿಎಂಎಂ ನ್ಯಾಯಾಲಯದಲ್ಲಿ ಈ ಪ್ರಕರಣ ದಾಖಲಿಸಿದ್ದಾರೆ.

ಲೋಕಾಯುಕ್ತರು, ಡಾ. ಸುಬ್ರಹ್ಮಣ್ಯ ಈ ಪ್ರಕರಣ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ.ಅವರಿಗೆ ಮಾನವೀಯತೆ ಇಲ್ಲ' ಎಂದಿದ್ದಾರೆ.ಇದು ಯಾವುದೇ ವ್ಯಕ್ತಿಯ ವರ್ಚಸ್ಸು ಕುಗ್ಗಿಸುವ ಮಾತಾಗಿದೆ. ಹೀಗಾಗಿ ಪ್ರಕರಣದಾಖಲಿಸಲಾಗಿದೆ ಎಂದು ಬಿಬಿಎಂಪಿಆಯುಕ್ತರ ಪರ ವಕೀಲರು ತಿಳಿಸಿದ್ದಾರೆ.ಮನಸ್ಸಿಗೆ ನೋವಾಗಿದೆ ಈ ಬಗ್ಗೆ ಡಾ. ಸುಬ್ರಹ್ಮಣ್ಯ ಅವರ ಗಮನ ಸೆಳೆದಾಗ, ಲೋಕಾಯುಕ್ತರ ದೋಷಾರೋಪದಿಂದ ಮನಸ್ಸಿಗೆ ಬಹಳ ಬೇಸರವಾಗಿದೆ.

ಮೋರಿಯಲ್ಲಿ ಬಿದ್ದು ಅಭಿಷೇಕ್ ಪ್ರಾಣ ಹೋಗಿದ್ದಕ್ಕೆ ನನಗೂ ತೀವ್ರ ದುಃಖವಾಗಿದೆ.ಆತನ ಪತ್ತೆಗೆ ಅಂದು ರಾತ್ರಿಯಿಂದಲೇ ತೀವ್ರಯತ್ನ ನಡೆಸಲಾಗಿದೆ. ಆದರೆ, ನನ್ನೊಬ್ಬನನ್ನೇಹೊಣೆಯಾಗಿಸಿ ದೂಷಿಸಿದ್ದು ಸರಿ ಕಾಣಲಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.

ಬಿಬಿಎಂಪಿಗೆಛೀಮಾರಿ
ವಾಹನ ಮತ್ತಿತರ ಸೌಲಭ್ಯ ಹೊಂದಿರುವ ಬಿಬಿಎಂಪಿಅಧಿಕಾರಿಗಳು ಮನೆಯಿಂದಹೊರಬಂದು ಸಾಮಾನ್ಯನನೆರವಿಗೆ ಧಾವಿಸಲಿ ಎಂದು ಹೈಕೋರ್ಟ್ ಹೇಳಿದೆ.ಪಾದಚಾರಿ ರಸ್ತೆಗಳ ನಿರ್ವಹಣೆ, ಸಾರ್ವಜನಿಕ ಶೌಚಾಲಯ ಸೌಲಭ್ಯ, ತ್ಯಾಜ್ಯ ವಸ್ತುಗಳ ವೈಜ್ಞಾನಿಕ ಸಂಸ್ಕರಣೆಯಲ್ಲಿ ವಿಫಲವಾಗಿರುವ ಬಿಬಿ ಎಂಪಿಗೆ ಹೈಕೋರ್ಟ್ ಛೀಮಾರಿ ಹಾಕಿದೆ. ಬಾಲಕ ಅಭಿಷೇಕ್ ಸಾವಿನ ಬಗ್ಗೆವಿಷಾದ ವ್ಯಕ್ತಪಡಿಸಿದ ಪೀಠ, ಐಎಎಸ್ ಅಧಿಕಾರಿಗಳು ಸಾರ್ವಜನಿಕರ ಅಹವಾಲುಗಳಿಗೆ ಯಾವ ರೀತಿ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂಬುದನ್ನು ಖಾತ್ರಿಪಡಿಸಿ, ವರದಿ ನೀಡುವಂತೆ ಅಡ್ವೊಕೇಟ್ ಜನರಲ್‌ಗೆ ಸೂಚಿಸಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X