Get Updates
Get notified of breaking news, exclusive insights, and must-see stories!

ತೃತೀಯ ರಂಗ ರಚನೆ ಮಾಡಿದ್ದು ತಪ್ಪು, ಎಡಪಕ್ಷ

AB Bardhan
ನವದೆಹಲಿ, ಜೂ. 5 : ಕೆಟ್ಟ ಮೇಲೆ ಎಡಪಕ್ಷಗಳ ನಾಯಕರಿಗೆ ಬುದ್ಧಿ ಬಂದಿದೆ. ಭಾರತ-ಅಮೆರಿಕ ಪರಮಾಣು ಒಪ್ಪಂದ, ಸಿಂಗೂರ್ ನಲ್ಲಿ ರೈತರ ಮೇಲೆ ನಡೆಸಿದ ಪೊಲೀಸ್ ಹಲ್ಲೆ ಮತ್ತು ನಂದಿಗ್ರಾಮದಲ್ಲಿ ನಡೆದ ಹಿಂಸಾಚಾರದಿಂದಾಗಿ ಪಶ್ಚಿಮ ಬಂಗಾಲದಲ್ಲಿ ಎಡಪಕ್ಷಗಳಿಗೆ ಸೋಲುಂಟಾಯಿತು. ಮನಮೋಹನ್ ಸಿಂಗ್ ಅವರನ್ನು ನಡುನೀರಿನಲ್ಲಿ ಕೈಬಿಟ್ಟಿದ್ದಕ್ಕೆ ಭಾರಿ ಬೆಲೆ ತೆರಬೇಕಾಯಿತು ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಎ ಬಿ ಬರ್ಧನ್ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ವಾರ್ತಾವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತ ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಎಡಪಕ್ಷಗಳ ವಿರೋಧ ಸರಿಯಾಗಿತ್ತು. ಆದರೆ, ಜನರು ನಮ್ಮ ವಿರೋಧವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ ಎಂದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಹೆಚ್ಚು ಪ್ರಸ್ತಾಪ ಮಾಡಲಿಲ್ಲ. ಆದರೆ, ಪಶ್ಚಿಮ ಬಂಗಾಲದಲ್ಲಿ ನಡೆದ ಸಿಂಗೂರ್ ಮತ್ತು ನಂದಿಗ್ರಾಮ ಹಿಂಸಾಚಾರಗಳು ನಮಗೆ ಬಲವಾದ ಪೆಟ್ಟು ನೀಡಿವೆ ಎಂದು ವಿವರಿಸಿದರು.

ತೃತೀಯ ರಂಗ ರಚನೆ ಮಾಡಿಕೊಂಡು ಚುನಾವಣೆಗೆ ಇಳಿದಿದ್ದು, ಎಡಪಕ್ಷಗಳ ದೊಡ್ಡ ತಪ್ಪು. ಇದರಿಂದಾಗ ನಾವು ತಕ್ಕ ಬೆಲೆ ತೆತ್ತಿದ್ದೇವೆ. ಪ್ರಾದೇಶಿಕ ಪಕ್ಷಗಳೊಂದಿಗೆ ರಚಿಸಿಕೊಂಡಿದ್ದು ಮಹಾಪರಾಧಿ. ತೃತೀಯ ರಂಗ ಎಂದಿಗೂ ಬಾಳಿಕೆ ಬರುವುದಿಲ್ಲ ಎನ್ನುವುದು ನಮಗೆ ತಡವಾಗಿ ಅರಿವಾಯಿತು. ಆದರೆ, ಸಮಯ ಆದಾಗಲೇ ಮಿಂಚಿತ್ತು ಎಂದು ಬರ್ಧನ್ ಹೇಳಿದರು.

ಕಳೆದ 30 ವರ್ಷಗಳಲ್ಲಿ ಎಡಪಕ್ಷಗಳ ಭಾರಿ ಪ್ರಮಾಣ ಸೋಲನ್ನು ಈ ಲೋಕಸಭೆ ಚುನಾವಣೆಯಲ್ಲಿ ಕಾಣಬೇಕಾಯಿತು. ಕಾಂಗ್ರೆಸ್ ಪಕ್ಷದೊಂದಿಗೆ ಚುನಾವಣೆ ಎದುರಿಸಿದ್ದರೆ ಎಡಪಕ್ಷಗಳಿಗೆ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಆದರೆ, ವಿನಾಕಾರಣ ಸಮಸ್ಯೆಯನ್ನು ತಂದುಕೊಂಡಿದ್ದೇವೆ. ಇದರ ಬಗ್ಗೆ ಸಂಪೂರ್ಣ ಅವಲೋಕನ ಮಾಡಲಾಗಿದೆ ಎಂದು ಅವರು ಹೇಳಿದರು.

(ಏಜನ್ಸೀಸ್)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+