ಬಿಜೆಪಿ ಭಿನ್ನಮತ : ರೆಡ್ಡಿ ನೇತೃತ್ವದಲ್ಲಿ ಸಭೆ

ರೆಡ್ಡಿ ಬೆಂಬಲಿಗರ ಸಭೆಯಲ್ಲಿ ಮುಖ್ಯವಾಗಿ ಸಚಿವ ಸ್ಥಾನ ಕಳೆದುಕೊಂಡ ಎಸ್ ಕೆ ಬೆಳ್ಳುಬ್ಬಿ, ಸಚಿವರಾದ ಶ್ರೀರಾಮುಲು, ಶಿವನಗೌಡ ನಾಯಕ್, ಆನಂದ್ ಅಸ್ನೋಟಿಕರ್, ಡಿ, ಸುಧಾಕರ್, ಬಾಲಚಂದ್ರ ಜಾರಕಿಹೊಳಿ, ಬೇಳೂರು ಗೋಪಾಲಕೃಷ್ಣ, ರಾಜುಗೌಡ, ಸಾರ್ವಬೌಮ ಬಗಲಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವರು ಮತ್ತು ಶಾಸಕರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಬಳ್ಳಾರಿ ಗಣಿ ವಿವಾದಕ್ಕೆ ಸಂಬಂಧಿದಂತೆ ಮುಖ್ಯಮಂತ್ರಿಗಳ ನಿಲುವುಗಳ ಬಗ್ಗೆ ಚರ್ಚೆ ನಡೆಯುತ್ತಿವೆ ಎನ್ನಲಾಗಿದೆ. ಆದರೆ, ಜನಾರ್ದನರೆಡ್ಡಿ ಅವರನ್ನು ಗುರುವಾರ ಬಿಜೆಪಿ ಹೈಕಮಾಂಡ್ ದೆಹಲಿಗೆ ಕರೆಸಿಕೊಂಡು ಚರ್ಚೆ ನಡೆಸಿದ್ದಲ್ಲದೇ, ಭಿನ್ನಮತ ಶಮನಕ್ಕೆ ಮುಂದಾಗಿದ್ದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications