4000 ಕೋ ರುಗಳಲ್ಲಿ ಮೋರಿಗಳ ದುರಸ್ತಿ
ಬೆಂಗಳೂರು, ಜೂ. 5 : ಮುಂಬರುವ ಎರಡು ವರ್ಷಗಳಲ್ಲಿ ಬೆಂಗಳೂರಿನ ಚರಂಡಿಗಳ ನವೀಕರಣ ಸೇರಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ರಾಜ್ಯ ಸರಕಾರ ಸುಮಾರು 4000 ಕೋಟಿ ರುಪಾಯಿಗಳನ್ನು ವಿನಿಯೋಗಿಸಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಹಾಗೂ ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಭರವಸೆ ನೀಡಿದರು.
ಈ ಹಿಂದೆ ನರ್ಮ್ ಯೋಜನೆಯಡಿ ಮೋರಿ ಹೂಳೆತ್ತುವುದು ಸೇರಿದಂತೆ ಮತ್ತಿತರ ಕಾಮಗಾರಿಗಳಿಗೆ ಕೋಟ್ಯಂತರ ರುಪಾಯಿ ವೆಚ್ಚ ಮಾಡಲಾಗಿದೆ. ಅದರೆ, ಗುತ್ತಿಗೆದಾರರು ಸಮರ್ಪಕವಾಗಿ ಕಾಮಗಾರಿ ನಡೆಸಿಲ್ಲ ಎಂದರು. ನಗರದ ಎಲ್ಲ ದೊಡ್ಡ ಮೋರಿಗಳನ್ನು ಹೂಳೆತ್ತುವುದು. ತಳಭಾಗದಲ್ಲಿ ಸಿಮೆಂಟ್ ಹಾಸು ಹಾಕಿಸುವುದು. ಸುತ್ತಲೂ ತಡೆಗೋಡೆ ಮತ್ತು ಬೇಲಿ ನಿರ್ಮಾಣಕ್ಕೆ 4 ಸಾವಿರ ಕೋಟಿ ರುಪಾಯಿ ಯೋಜನೆಯನ್ನು ರೂಪಿಸಲಾಗಿದೆ ಎಂದು ಹೇಳಿದರು.
ಮುಂಗಿನ ಎರಡು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳಿಸಲು ಗುರಿ ಹಾಕಿಕೊಳ್ಳಲಾಗಿದೆ. ಬಿಬಿಎಂಪಿ ಆದಾಯ ಹಾಗೂ ಅಗತ್ಯ ಬಿದ್ದರೆ ಹಣಕಾಸು ಸಂಸ್ಥಗಳಿಂದ ಸಾಲು ಪಡದುಕೊಂಡು ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications