ಪುಟ್ಟಪರ್ತಿ ಸಾಯಿಬಾಬಾ ದರ್ಶನ ಪಡೆದ ಬಿಎಸ್ ವೈ

Yeddyurappa visits Puttaparthi
ಪುಟ್ಟಪರ್ತಿ, ಜೂ.2: ಕರ್ನಾಟಕದ ಹೊಸ ಸಂಸದರು ಸೋಮವಾರ ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿಸುವುದಕ್ಕೂ ಮುನ್ನ ನವದೆಹಲಿಯ ದೇವಸ್ಥಾನಗಳಿಗೆ ಭೇಟಿ ನೀಡಿದರು. ಕೆಲವು ಸಂಸದರು ಒಬ್ಬರಿಗೊಬ್ಬರು ಅಭಿನಂದನೆಗಳನ್ನು ಸಲ್ಲಿಸಿಕೊಂಡರು. ಕೆಲವರಂತೂ ಆಶೀರ್ವಾದ ಪಡೆಯಲು ಸ್ವಾಮೀಜಿಗಳ ಮೊರೆ ಹೋಕ್ಕರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಪುಟ್ಟಪರ್ತಿಗೆ ಭೇಟಿ ನೀಡಿ ಸತ್ಯ ಸಾಯಿಬಾಯಿ ಅವರ ಆಶೀರ್ವಾದ ಪಡೆದರು. ಯಡಿಯೂರಪ್ಪ ಅವರ ಸರಕಾರ ಒಂದು ವರ್ಷ ಪೂರೈಸಿದ ಕಾರಣಕ್ಕೆ ಅವರು ಪುಟ್ಟಪರ್ತಿಯ ಪ್ರಶಾಂತಿ ನಿಲಯಕ್ಕೆ ಭೇಟಿ ನೀಡಿದ್ದರು.

ಮುಖ್ಯಮಂತ್ರಿಗಳ ಜತೆ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸಹ ಇದ್ದದ್ದು ವಿಶೇಷ. ಸಾಯಿಬಾಬಾ ಅವರದರ್ಶನ ಪಡೆದನಂತರ ಯಡಿಯೂರಪ್ಪ ವಿಶೇಷ ಹೆಲಿಕಾಪ್ಟರ್ ನಲ್ಲಿ ಬೆಂಗಳೂರಿಗೆ ಹಿಂತಿರುಗಿದರು. ಸ್ಥಳೀಯ ಶಾಸಕ ಪಲ್ಲೆ ರಘುನಾಥ ರೆಡ್ಡಿ ಅವರು ಯಡಿಯೂರಪ್ಪ ಅವರನ್ನು ಬೀಳ್ಕೊಟ್ಟರು.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+