ಪುಟ್ಟಪರ್ತಿ ಸಾಯಿಬಾಬಾ ದರ್ಶನ ಪಡೆದ ಬಿಎಸ್ ವೈ

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಪುಟ್ಟಪರ್ತಿಗೆ ಭೇಟಿ ನೀಡಿ ಸತ್ಯ ಸಾಯಿಬಾಯಿ ಅವರ ಆಶೀರ್ವಾದ ಪಡೆದರು. ಯಡಿಯೂರಪ್ಪ ಅವರ ಸರಕಾರ ಒಂದು ವರ್ಷ ಪೂರೈಸಿದ ಕಾರಣಕ್ಕೆ ಅವರು ಪುಟ್ಟಪರ್ತಿಯ ಪ್ರಶಾಂತಿ ನಿಲಯಕ್ಕೆ ಭೇಟಿ ನೀಡಿದ್ದರು.
ಮುಖ್ಯಮಂತ್ರಿಗಳ ಜತೆ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸಹ ಇದ್ದದ್ದು ವಿಶೇಷ. ಸಾಯಿಬಾಬಾ ಅವರದರ್ಶನ ಪಡೆದನಂತರ ಯಡಿಯೂರಪ್ಪ ವಿಶೇಷ ಹೆಲಿಕಾಪ್ಟರ್ ನಲ್ಲಿ ಬೆಂಗಳೂರಿಗೆ ಹಿಂತಿರುಗಿದರು. ಸ್ಥಳೀಯ ಶಾಸಕ ಪಲ್ಲೆ ರಘುನಾಥ ರೆಡ್ಡಿ ಅವರು ಯಡಿಯೂರಪ್ಪ ಅವರನ್ನು ಬೀಳ್ಕೊಟ್ಟರು.
(ಏಜೆನ್ಸೀಸ್)












Click it and Unblock the Notifications