ಗ್ರಾಹಕರಿಗೆ ದೇಹಸುಖ ಕೊಟ್ರೆ ಕೆಲ್ಸ !: ಬಿದ್ದಪ್ಪ ಸಂಸ್ಥೆ
ಬೆಂಗಳೂರು ಜೂ 1: ನಮ್ಮ ಸಂಸ್ಥೆಯ ಗ್ರಾಹಕರೊಬ್ಬರಿಗೆ ದೈಹಿಕ ಸುಖ ನೀಡವುದಕ್ಕೆ ಒಪ್ಪುವುದಾದರೆ ಈ ಸಂಸ್ಥೆಯಲ್ಲಿ ಮಾಡೆಲಿಂಗ್ ಉದ್ಯೋಗ ಕೊಡುತ್ತೇವೆ ಈ ಷರತ್ತಿಗೆ ಒಪ್ಪಿಗೆ ಇಲ್ಲದಿದ್ದರೆ ಕೆಲಸ ಇಲ್ಲ ಎನ್ನುವ ಎಸ್ಎಂಎಸ್ ಸಂದೇಶವನ್ನು ಬೆಂಗಳೂರಿನ ಹೆಸರಾಂತ ಮಾಡೆಲಿಂಗ್ ಸಂಸ್ಥೆ 'ಪ್ರಸಾದ್ ಬಿದ್ದಪ್ಪ ಅಸೋಸಿಯೇಟ್ಸ್ ' ಮಾಡೆಲಿಂಗ್ ಉದ್ಯೋಗಾಂಕ್ಷಿಯೊಬ್ಬಳಿಗೆ ಕಳುಹಿಸಿದೆ ಎಂದು 'ಮಿಡ್ ಡೇ' ತನ್ನ ಅಂತರ್ಜಾಲದಲ್ಲಿ ವರದಿಮಾಡಿದೆ.
24ವರ್ಷದ ರಿಯಾ (ಹೆಸರು ಬದಲಾಯಿಸಲಾಗಿದೆ) ಎನ್ನುವವರು ಮಹದೇವಪುರ ಪೋಲಿಸ್ ಠಾಣೆಯಲ್ಲಿ ಆ ಸಂಸ್ಥೆಯ ವಿರುದ್ದ ಕೇಸು ದಾಖಲಿಸಿದ್ದಾರೆ. ಉದ್ಯೋಗ ಅರಸಿಕೊಂಡು ಒಂದು ವರ್ಷದ ಹಿಂದೆ ಬೆಂಗಳೂರಿಗೆ ಆಗಮಿಸಿದ ರಿಯಾ, ಕೆಲಸದ ಬಹಳ ಹುಡುಕಾಟದ ನಂತರ ಬಿದ್ದಪ್ಪ ಸಂಸ್ಥೆಯಲ್ಲಿ ಮಾಡೆಲಿಂಗ್ ಕೆಲಸಕ್ಕೆ ಅರ್ಜಿ ಹಾಕಿದರು. ಏಪ್ರಿಲ್ 30ನೇ ತಾರೀಕಿಗೆ ಸಂಸ್ಥೆಯಿಂದ ಪ್ರತ್ಯುತ್ತರ ಬಂದು ಮೇ 6ನೇ ತಾರೀಕಿಗೆ ಕಚೇರಿಗೆ ಬರುವಂತೆ ಸೂಚಿಸಿತು. ಆ ದಿನಾಂಕದಂದು ಕಚೇರಿಗೆ ಹೋದ ರಿಯಾಗೆ ಮೇ 10ನೇ ತಾರೀಕು ಸಂದರ್ಶನಕ್ಕೆ ಬರುವಂತೆ ಸೂಚಿಸಿತು ಆದರೆ ಈ ಸಂದರ್ಶನದಲ್ಲಿ ರಿಯಾ ಆಯ್ಕೆಯಾಗಲಿಲ್ಲ.
ಈಕೆ ನೀಡಿದ ದೂರಿನ ಪ್ರಕಾರ ಸಂದರ್ಶನ ನಡೆದ ಎರಡು ವಾರದ ನಂತರ ಬಿದ್ದಪ್ಪ ಸಂಸ್ಥೆಯ ಅಮಿತ್ ಎನ್ನುವ ಉದ್ಯೋಗಿ ಈಕೆಗೆ ಎಸ್ಎಂಎಸ್ ಸಂದೇಶವೊಂದನ್ನು ರವಾನಿಸಿದ. ಅದರಲ್ಲಿ ' ಸಂಸ್ಥೆಯ ಗ್ರಾಹಕರೊಬ್ಬರನ್ನು ನಿಭಾಯಿಸಬೇಕು, ಅವರಿಗೆ ದೈಹಿಕ ಸುಖ ನೀಡಬೇಕು, ಇದಕ್ಕೆ ಒಪ್ಪುವುದಾದರೆ ನಮ್ಮ ಸಂಸ್ಥೆಯಲ್ಲಿ ಉದ್ಯೋಗ ಸಿಗುತ್ತದೆ ಇಲ್ಲವಾದಲ್ಲಿ ಇಲ್ಲಿ ಸಾಧ್ಯವಿಲ್ಲ' ಎಂದು ಬರೆದಿತ್ತು ಎಂದು ರಿಯಾ ದೂರಿನಲ್ಲಿ ಹೇಳಿದ್ದಾರೆ.
ಘಟನೆಯ ಬಗ್ಗೆ ಮಿಡ್ ಡೇ ಪತ್ರಿಕೆ ಪ್ರಸಾದ್ ಬಿದ್ದಪ್ಪ ಅವರನ್ನು ಸಂದರ್ಶಿಸಿದಾಗ ಈ ಘಟನೆ ಬಗ್ಗೆ ನನ್ನ ಬಳಿ ಹೆಚ್ಚಿನ ಮಾಹಿತಿ ಇಲ್ಲ. ನಮ್ಮ ಸಂಸ್ಥೆಯಿಂದ ಏನಾದರೂ ತೊಂದರೆಯಾಗಿದ್ದರೆ ಕ್ಷಮೆಯಾಚಿಸುತ್ತೇನೆ, ಅಮಿತ್ ನನ್ನು ಈ ಕೂಡಲೇ ಕೆಲಸದಿಂದ ವಜಾಗೊಳಿಸಿದ್ದೇನೆ ಎಂದು ಉತ್ತರ ನೀಡಿದ್ದಾರೆ.
(ದಟ್ಸ್ ಕನ್ನಡವಾರ್ತೆ)
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications