ಕಾಂಗ್ರೆಸ್ ಇಲ್ಲಾಂದ್ರೆ ದೇಶಾನೇ ಇಲ್ಲ: ಡಿಕೆಶಿ

ನೆಹರೂ ಮನೆತನದವರು ಈ ದೇಶದ ಆಸ್ತಿ, ಅಧಿಕಾರ ತ್ಯಾಗ ಮಾಡಿ ಈ ದೇಶವನ್ನು ಕಟ್ಟಿದರು. ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿಯವರ ಆದರ್ಶವನ್ನು ನಾವು ಜೀವನದಲ್ಲಿ ಪಾಲಿಸಿಕೊಳ್ಳಬೇಕು. ಲೋಕಸಭಾ ಚುನಾವಣೆಯಲ್ಲಿ ನಮಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಆದರೂ ರಾಜ್ಯಕ್ಕೆ ಕೇಂದ್ರ ಸರಕಾರ ಪ್ರಾತಿನಿಧ್ಯ ನೀಡಿದೆ. ಮುಂದಿನ ದಿನಗಳಲ್ಲಿ ಕರ್ನಾಟಕವನ್ನು ಕಾಂಗ್ರೆಸ್ ರಾಜ್ಯವನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದ್ದೇವೆ ಎಂದರು.
ಎಂ ಪಿ ಪ್ರಕಾಶ್ ಮಾತನಾಡಿ ನೆಹರೂ ಅವರು ಅಪರೂಪದ ವ್ಯಕ್ತಿತ್ವವುಳ್ಳವರು. ಅವರಂಥವರು ಬಹಳ ವಿರಳ, ಸರಳ, ಸಜ್ಜನಿಕೆಯ ಪ್ರತಿರೂಪವಾಗಿದ್ದರು. ಅವರ ಆರ್ಥಿಕ ನೀತಿ, ಉದ್ಯೋಗಿಕರಣ ನೀತಿಯಿಂದ ದೇಶ ಅಭಿವೃದ್ದಿ ಶೀಲ ರಾಷ್ಟ್ರವಾಗಿ ಬೆಳೆಯಿತು. ಪ್ರಜಾಪ್ರಭುತ್ವ ಭದ್ರವಾಗಿ ನೆಲೆಯೂರುವಂತೆ ಮಾಡಿದ ಕೀರ್ತಿ ನೆಹರು ಅವರಿಗೆ ಸಲ್ಲಿಸಬೇಕು ಎಂದು ಪ್ರಕಾಶ ಹಾಡಿ ಹೊಗಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications