Get Updates
Get notified of breaking news, exclusive insights, and must-see stories!

ಹೆಚ್ಚುವರಿ ಮಹಾನಿರ್ದೇಶಕರಾಗಿ ಐಪಿಎಸ್ ಕೆಂಪಯ್ಯ

ಬೆಂಗಳೂರು, ಮೇ.26: ರಾಜ್ಯ ಸರ್ಕಾರ 13 ಐಪಿಎಸ್ ಅಧಿಕಾರಿಗಳು ವರ್ಗಾವಣೆಮಾಡಿದ್ದು ಎಲ್ಲರಿಗೂ ಉನ್ನತ ಅಧಿಕಾರ ಸಿಕ್ಕಿದೆ. ಕೆಎಸ್ ಆರ್ ಪಿಯಲ್ಲಿ ಐಜಿ ಆಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರು ಅಂತರಿಕ ಸುರಕ್ಷತೆ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕ(ADGP)ರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಅರಣ್ಯ ಇಲಾಖೆಯ ಐಜಿಪಿ ಓಂ ಪ್ರಕಾಶ್ ಅವರನ್ನು ಕ್ರೈಂ ಮತ್ತು ತಾಂತ್ರಿಕ ಸಲಹ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕರಾಗಿ ನೇಮಿಸಲಾಗಿದೆ. ನಾಗರೀಕ ಹಕ್ಕು ವಿಭಾಗ ಡಿಐಜಿ ಜಯಪ್ರಕಾಶ್ ವಿ ನಾಯಕ್ ಅವರನ್ನು ಯೋಜನಾ ಮತ್ತು ಅಧುನೀಕರಣ ವಿಭಾಗದ ಐಜಿಪಿ ಹುದ್ದೆಗೆ ವರ್ಗಾಯಿಸಲಾಗಿದೆ.ಪಶ್ಚಿಮ ವಲಯ ಡಿಐಜಿ ಗೋಪಾಲ್ ಹೊಸೂರ್ ಅವರನ್ನು ಅದೇ ವಲಯದ ಐಜಿಪಿ ಆಗಿ ಬಡ್ತಿ ನೀಡಲಾಗಿದೆ.

ಅಗ್ನಿ ಸೇವಾ ವಿಭಾಗದ ಡಿಐಜಿಮಹಮದ್ ವಜೀರ್ ಆಹಮದ್ ಅವರಿಗೆ ಬಡ್ತಿ ನೀಡಿ ನಾಗರೀಕ ಹಕ್ಕು ಪ್ರತಿಪಾದಕ ವಿಭಾಗದ ಐಜಿಪಿ ಮಾಡಲಾಗಿದೆ. ನೇಮಕಾತಿ ಹಾಗೂ ತರಬೇತಿ ವಿಭಾಗದ ಡಿಐಜಿ ಸುನೀಲ್ ಅಗರವಾಲ್ ಅವರನ್ನು ಕೆಎಸ್ ಆರ್ ಟಿಸಿ ವಿಭಾಗದ ಐಜಿಪಿ ಹುದ್ದೆಗೇರಿಸಲಾಗಿದೆ. ಹೆಚ್ಚುವರಿ ವೃತ್ತಿಯಾಗಿ ಬಿಹಾರದಲ್ಲಿ ಕಾರ್ಯನಿರತರಾಗಿರುವ ಉಮೇಶ್ ಕುಮಾರ್ ಅವರನ್ನು ಡಿಐಜಿ ಶ್ರೇಣಿಗೆ ಏರಿಸಲಾಗಿದೆ.

ಬಿಜಾಪುರದ ಎಸ್ ಪಿ ಅರುಣ್ ಚಕ್ರವರ್ತಿ ಅವರನ್ನು ಬಿಎಂಟಿಸಿ ಭದ್ರತಾ ವಿಭಾಗದ ಡಿಐಜಿ ಮಾಡಲಾಗಿದೆ. ಬೆಂಗಳೂರು ಉತ್ತರದ ಡಿಸಿಪಿ ಸೈಯದ್ ಹುಸೇನ್ ಅವರನ್ನು ನೇಮಕಾತಿ ಮತ್ತು ತರಬೇತಿ ವಿಭಾಗದ ಡಿಐಜಿ ಮಾಡಲಾಗಿದೆ. ಕೊಡಗು ಎಸ್ ಪಿ ರಮೇಶ್ ಎಸ್ ಅವರಿಗೆ ಬಡ್ತಿ ನೀಡಿ ರೈಲ್ವೇ ವಿಭಾಗದ ಡಿಐಜಿಯಾಗಿ ನೇಮಕ ಮಾಡಲಾಗಿದೆ.
(ಏಜೆನ್ಸೀಸ್)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+