ಟಿಪ್ಪು ಕನ್ನಡ, ಹಿಂದು ವಿರೋಧಿಯಲ್ಲ: ಮುಮ್ತಾಜ್
ಬೆಂಗಳೂರು, ಮೇ.25: ಹಿಂದು ಧರ್ಮ ಸೇರಿದಂತೆ ಎಲ್ಲ ಧರ್ಮಗಳ ಬಗ್ಗೆಯೂ ಟಿಪ್ಪು ಸುಲ್ತಾನ್ ಗೌರವ ಭಾವನೆ ಹೊಂದಿದ್ದ ಎಂದು ಇತಿಹಾಸದ ದಾಖಲೆಗಳಿಂದ ತಿಳಿಯುತ್ತದೆ ಎಂದು ವಕ್ಫ್ ಸಚಿವ ಪ್ರೊ.ಮುಮ್ತಾಜ್ ಆಲಿ ಖಾನ್ ತಿಳಿಸಿದರು.
ಟಿಪ್ಪು ಬೇಸಿಗೆ ಅರಮನೆಯಲ್ಲಿ ಏರ್ಪಡಿಸಿರುವ ಟಿಪ್ಪುಗೆ ಸಂಬಂಧಿಸಿದ ವಸ್ತುಗಳ ಪ್ರದರ್ಶನವನ್ನು ಉದ್ಘಾಟಿಸಿದ ಬಳಿಕ ಅವರು ಮಾತನಾಡುತ್ತಿದ್ದರು. ಟಿಪ್ಪುಸುಲ್ತಾನ್ ಹಿಂದು ಮತ್ತು ಕನ್ನಡ ವಿರೋಧಿಯಾಗಿದ್ದ ಎಂಬುದು ಸುಳ್ಳು. ಇದು ಸರಿಯಲ್ಲ. ಆತ ಎಲ್ಲ ಧರ್ಮಗಳ ಬಗ್ಗೆಯೂ ಸಮಾನ ಗೌರವ ಹೊಂದಿದ್ದ ಎಂಬುದಕ್ಕೆ ಆಧಾರಗಳಿವೆ ಎಂದು ಹೇಳಿದರು.
ಟಿಪ್ಪು ಸುಲ್ತಾನ್ ಕನ್ನಡ ಪ್ರೇಮಿಯಾಗಿದ್ದ ಎಂಬುದಕ್ಕೆ ಆತ ಕನ್ನಡದಲ್ಲಿ ವ್ಯವಹರಿಸುತ್ತಿದ್ದ ಪತ್ರಗಳೇ ಸಾಕ್ಷಿ. ದೇಶಕ್ಕಾಗಿ ವೀರಮರಣ ಹೊಂದಿದ ಟಿಪ್ಪು ಬಗ್ಗೆ ಕೆಲವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications