ವಿಯೆನ್ನಾದಲ್ಲಿ ಸಿಖ್ ಗುರು ಹತ್ಯೆ; ಜಲಂಧರ್ ಉದ್ವಿಗ್ನ

ವಿಯೆನ್ನಾದ ಗುರುದ್ವಾರದಲ್ಲಿ ಡೇರಾ ಗುರು ನಿರಂಜನದಾಸ ಉಪನ್ಯಾಸ ನೀಡುತ್ತಿದ್ದರು.ಆದರೆ ಗುರುಗಳ ಉಪದೇಶ ಒಂದು ಗುಂಪುಗೆ ಅಪಥ್ಯವಾದ ಕಾರಣ, ಗುರುವಿನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಎರಡು ಪಂಥದವರ ಮಧ್ಯೆ ಗುಂಡಿನ ದಾಳಿ ಸಹ ನಡೆದು, 11 ಜನ ಗಾಯಗೊಂಡರು ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡ 9 ಜನರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.ಘಟನೆ ಸಂಬಂಧ ಆರು ಜನರನ್ನು ಬಂಧಿಸಲಾಗಿದೆಎಂದು ವಿಯೆನ್ನಾ ಪೊಲೀಸರು ತಿಳಿಸಿದ್ದಾರೆ
ಪರಿಸ್ಥಿತಿ ಸುಧಾರಣೆಗೆ ಕೃಷ್ಣ ಮನವಿ: ಸಿಖ್ ಗುರು ಹತ್ಯೆ ಸಂಬಂಧವಾಗಿ ಆಸ್ಟ್ರೀಯಾ ದೇಶದೊಡನೆ ಮಾತುಕತೆ ನಡೆದಿದ್ದು, ಪೂರ್ಣವಿವರವನ್ನು ಪಡೆಯಲಾಗುವುದು. ಸಿಖ್ ಸಮುದಾಯ ಶಾಂತಿ ರೀತಿಯಿಂದ ವರ್ತಿಸಬೇಕು ಎಂದು ಇಂದು ಅಧಿಕಾರ ಸ್ವೀಕರಿಸಿದ ವಿದೇಶಾಂಗ ಖಾತೆ ಸಚಿವ ಎಸ್ ಎಂ ಕೃಷ್ಣ ಮನವಿ ಮಾಡಿಕೊಂಡಿದ್ದಾರೆ.
(ದಟ್ಸ್ ಕನ್ನಡವಾರ್ತೆ)











Click it and Unblock the Notifications