ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕಿಡ್ನಾಪ್
ಬೆಂಗಳೂರು, ಮೇ.23: ರಿಯಲ್ ಎಸ್ಟೇಟ್ ಉದ್ಯಮಿ ಉಮಾಪತಿ ನಾಯ್ಡು ಎಂಬುವರರನ್ನು ಬೆಂಗಳೂರಿನ ಸಾರ್ವಭೌಮ ನಗರದಲ್ಲಿ ಶನಿವಾರ ಅಪಹರಣ ಮಾಡಲಾಗಿದೆ. ಕಾರಿನಲ್ಲಿ ಬಂದ ದುಷ್ಕರ್ಮಿಗಳು ಈ ದುಷ್ಕೃತ್ಯ ಎಸಗಿದ್ದಾರೆ.
ಅಪಹರಣಕಾರರ ಉದ್ದೇಶವಾಗಲಿ ಅವರ ಬೇಡಿಕೆಗಳೇನು ಎಂಬುದಾಗಲಿ ಇನ್ನೂ ತಿಳಿದುಬಂದಿಲ್ಲ. ಉಮಾಪತಿ ನಾಯ್ಡು ಸಂಬಂಧಿಕರಿಗೆ ಅಪಹರಣಕಾರರು ಇದುವರೆಗೂ ಯಾವುದೇ ಕರೆಯನ್ನೂ ಮಾಡಿಲ್ಲ. ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಹರಣಕಾರರ ಜಾಡನ್ನು ಪತ್ತೆ ಹಚ್ಚಲು ಸುಬ್ರಹ್ಮಣ್ಯಪುರ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.
ಅಪಹರಣದಲ್ಲಿ ಉಮಾಪತಿ ಸಂಬಂಧಿಕರ ಕೈವಾಡ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಒತ್ತೆಹಣಕ್ಕಾಗಲಿ, ಇನ್ಯಾವುದೇ ಬೇಡಿಕೆಗಾಗಲಿ ಅಪಹರಣಕಾರರಿಂದ ಬೇಡಿಕೆ ಬಂದಿಲ್ಲದಿರುವುದು ಪೊಲೀಸರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಅಪಹರಣಕಾರರ ದೂರವಾಣಿ ಸಂಖ್ಯೆಯನ್ನುಟ್ಯಾಪ್ ಮಾಡಿ ಅವರು ಇರುವ ಸ್ಥಳವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ನಿರತರಾಗಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)