ದಕ್ಷಿಣ ಭಾರತದ ಅತ್ಯಂತ ಕಿರಿಯ ಸಂಸದ ರಾಘವೇಂದ್ರ
ಬೆಂಗಳೂರು, ಮೇ.23: ದಕ್ಷಿಣ ಭಾರತದ ಅತ್ಯಂತ ಕಿರಿಯ ಸಂಸದ ಎಂಬ ಹೆಗ್ಗಳಿಕೆಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮಗ ಬಿ ವೈ ರಾಘವೇಂದ್ರ ಪಾತ್ರರಾಗಿದ್ದಾರೆ. ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವುದು ಗೊತ್ತೇ ಇದೆ.
ಕೇರಳದ ತಿರುವನಂತಪುರಂ ಕ್ಷೇತ್ರದಿಂದ ಆಯ್ಕೆಯಾಗಿರುವ ಶಶಿ ತರೂರ್ ಗಿಂತ ರಾಘವೇಂದ್ರ ಕಿರಿಯ ಸಂಸದ. ಪಕ್ಷದ ಸಂಸದರ ಪೈಕಿಯೂ ರಾಘವೇಂದ್ರ ಕಿರಿಯ ಎಂದು ಬಿಜೆಪಿ ಅಂಕಿ ಅಂಶಗಳು ಹೇಳುತ್ತವೆ. ರಾಜ್ಯದ ಸಂಸದರಲ್ಲಿ ಸಹ ರಾಘವೇಂದ್ರ ಕಿರಿಯ. ರಾಘವೇಂದ್ರದ ನಂತರದ ಸ್ಥಾನದಲ್ಲಿ ಶಿವಕುಮಾರ್ ಉದಾಸಿ ಮತ್ತು ನಳೀನ್ ಕುಮಾರ್ ಕಟೀಲ್ ಇದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಮುಂದೆ ನಾನು ಸಣ್ಣವನು. ಅನುಭವ ಇಲ್ಲ ನಿಜ, ಮುಂದೆ ಅನುಭವ ಗಳಿಸುತ್ತೇನೆ. ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದರು. ಯುವಕರು ರಾಜಕೀಯಕ್ಕೆ ಬೇಕು. ಜನಪ್ರತಿನಿಧಿಯಾಗಬೇಕು ಎಂಬಜನರ ನಿರೀಕ್ಷೆ ನಿಜವಾಗಿದೆ ಎನ್ನುತ್ತಾರೆ ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸುತ್ತಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications