ನವೀನ ಪಟ್ನಾಯಕ್ ಸಿಎಂ ಆಗಿ ಪ್ರಮಾಣ ವಚನ
ಭುಬನೇಶ್ವರ,
ಮೇ. 21 : ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಪ್ರಚಂಡ ಜಯಭೇರಿ ಬಾರಿಸಿರುವ ಬಿಜು ಜನತಾದಳದ ಮುಖಂಡ ನವೀನ ಪಟ್ನಾಯಕ್ ಮೂರನೇ ಬಾರಿಗೆ ಒರಿಸ್ಸಾ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಎಂ ಸಿ ಭಂಡಾರೆ ಅವರು ನವೀನ ಪಟ್ನಾಯಕ್ ಅವರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಸರಿಸುಮಾರು 11.30ಕ್ಕೆ ಪಟ್ನಾಯಕ್ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. id="toptextpromo">ನವೀನ
ಪಟ್ನಾಯಕ್ ಅವರು ಸಂಪುಟಕ್ಕೆ 21 ಶಾಸಕರನ್ನು ಸೇರಿಸಿಕೊಂಡಿದ್ದು, 11 ಮಂದಿ ಕ್ಯಾಬಿನೆಟ್ ದರ್ಜೆ ಹಾಗೂ 10 ಜನರಿಗೆ ರಾಜ್ಯ ಖಾತೆಯನ್ನು ನೀಡುವುದಾಗಿ ಹೇಳಿದರು. ಸಂಪುಟದಲ್ಲಿ 7ಹೊಸಮುಖಗಳಿಗೆ ಅಧ್ಯತೆ ನೀಡಲಾಗಿದೆ. ಹೊಸಮುಖಗಳು ಯುವಕರಾಗಿದ್ದಾರೆ. ಕಳೆದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಡಿ ಅತ್ಯಧಿಕ ಸ್ಥಾನಗಳನ್ನು ಗಳಿಸಿದೆ. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)












Click it and Unblock the Notifications