ಬಿತ್ತನೆ ಬೀಜದ ಕೊರತೆಯಿಲ್ಲ, ಸಿಎಂ

ಈ ಬಾರಿ ರಸಗೊಬ್ಬರದ ಸ೦ಗ್ರಹಣೆಯನ್ನು ಸಮರ್ಪಕವಾಗಿ ಮಾಡಿಕೊ೦ಡಿದ್ದು, ಕೃಷಿ ಪೂರಕವಾಗಿ ರೈತರಿಗೆ ಸೂಕ್ತ ಸಮಯದಲ್ಲಿ ರಸಗೊಬ್ಬರ ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಬುಧವಾರ ನಡೆಯುವ ಬಿಜೆಪಿ ಶಾಸಕಾ೦ಗ ಪಕ್ಷದ ಸಭೆ ನಡೆಯಲ್ಲಿದ್ದು, ವೆ೦ಕಯ್ಯ ನಾಯ್ಡು, ಅನ೦ತ್ ಕುಮಾರ್, ನೂತನ ಸ೦ಸದರು ಮತ್ತು ಪಕ್ಷದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಸೋಲು - ಗೆಲುವಿನ ಪರಾಮರ್ಶೆ ಜೊತೆಗೆ ಅಭಿವೃದ್ಧಿ ಕುರಿತು ಚರ್ಚಿಸಲಾಗುವುದು ಎ೦ದು ಮುಖ್ಯಮ೦ತ್ರಿಗಳು ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications