ಮದುವೆಗೆ ನಿರಾಕರಿಸಿದ ಮಗನನ್ನು ಕೊಂದ ತಂದೆ !!
ಪಾಟ್ನಾ, ಮೇ. 20 : ಕೊಲೆ, ಸುಲಿಗೆ, ದಬ್ಬಾಳಿಕೆ, ಅತ್ಯಾಚಾರ ಮುಂತಾದ ಅಮಾನವೀಯ ಘಟನೆಗಳಿಗೆ ಬಿಹಾರ ಮತ್ತು ಉತ್ತರಪ್ರದೇಶ ಹಿಂದಿನಿಂದಲೂ ಹೆಸರುವಾಸಿ. ಎರಡನೇ ಮದುವೆಯಾಗುವುದಕ್ಕೆ ನಿರಾಕರಿಸಿದ ಮಗನನ್ನು ತಂದೆಯೇ ತನ್ನ ಸಂಬಂಧಿಕರು ಜೊತೆ ಸೇರಿ ಹೊಡೆದು ಸಾಯಿಸಿದ ಅಮಾನವೀಯ ಪ್ರಕರಣ ಬಿಹಾರ್ ದ ಭೋಜಪುರ್ ಜಿಲ್ಲೆಯಿಂದ ಇಂತಹ ಒಂದು ಘಟನೆ ನಡೆದಿದೆ.
ಧರ್ಮೇಂದ್ರ ಚೌಧುರಿ ರಾಜಧಾನಿ ಪಾಟ್ನಾದಿಂದ 60 ಕಿ.ಮೀ ದೂರದ ಭೋಜಪುರ್ ಜಿಲ್ಲೆಯ ಸರೋಪುರ ಹಳ್ಳಿಯ ನಿವಾಸಿ. ಈತನಿಗೆ 2003 ರಲ್ಲಿ ಬುಧಾನ್ ಚೌಧುರಿ ಅನ್ನುವವರ ಮಗಳು ಅನಿತಾ ಕುಮಾರಿ ಜೊತೆ ಮದುವೆ ನಡೆಯಿತು. ಮದುವೆಯಾಗಿ ಆರು ವರ್ಷವಾದರೂ ಮಗನಿಗೆ ಮಕ್ಕಳಾಗಲಿಲ್ಲ ಎನ್ನುವ ಕಾರಣಕ್ಕೆ ಎರಡನೇ ಮದುವೆ ಮಾಡಿಕೋ ಎಂದು ತಂದೆ ಮಗನನ್ನು ಅಗಾಗ ಪೀಡಿಸುತ್ತಿದ್ದ. ತಾನು ತನ್ನ ಹೆಂಡತಿಯೊಂದಿಗೆ ಸುಖವಾಗಿ ಸಂಸಾರ ನಡೆಸುತ್ತಿದ್ದೇನೆ. ಎರಡನೇ ಮದುವೆ ಆಗುವುದಿಲ್ಲ ಎನ್ನುವುದು ಮಗನ ವಾದವಾಗಿತ್ತು. ತಂದೆ ಮತ್ತು ಮಗನಿಗೆ ಈ ವಿಷಯದಲ್ಲಿ ವಾಗ್ದಾದ ನಡೆದಿದೆ. ಕೊನೆಗೂ ಮಗ ಎರಡನೇ ಮದುವೆಗೆ ಒಪ್ಪದಿದ್ದಾಗ ಕೆಂಡಾಮಂಡಲವಾದ ತಂದೆ ತನ್ನ ಬಂಧುಗಳ ಜೊತೆ ಸೇರಿ ಈತನನ್ನು ಸಾಯಿಸಿಬಿಟ್ಟಿದ್ದಾನೆ.
ಈ ಸಂಬಂಧ ಮೃತ ಧರ್ಮೇಂದ್ರನ ಮಾವ ಬುಧಾನ್ ಚೌಧುರಿ ದೂರು ದಾಖಲಿಸಿದ್ದಾರೆ. ಅಳಿಯನ ಸಾವಿಗೆ ಅವನ ಮನೆಯವರೇ ಕಾರಣ ಎಂದು ದೂರಿನಲ್ಲಿ ಹೇಳಿದ್ದಾರೆ. ಅಂದ ಹಾಗೆ ಬಿಹಾರದ ಗ್ರಾಮೀಣ ಪ್ರದೇಶದಲ್ಲಿ ಮದುವೆಯಾಗಿ ಮೂರು ವರ್ಷವಾದರೂ ಮಕ್ಕಳಾಗದಿದ್ದರೆ ಬೇರೊಂದು ಮದುವೆಯಾಗುವ ಪದ್ಧತಿ ಇಂದಿಗೂ ಜಾರಿಯಲ್ಲಿದೆಯಂತೆ !!
(ಏಜನ್ಸೀಸ್)
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications