ಮದುವೆಗೆ ನಿರಾಕರಿಸಿದ ಮಗನನ್ನು ಕೊಂದ ತಂದೆ !!
ಪಾಟ್ನಾ, ಮೇ. 20 : ಕೊಲೆ, ಸುಲಿಗೆ, ದಬ್ಬಾಳಿಕೆ, ಅತ್ಯಾಚಾರ ಮುಂತಾದ ಅಮಾನವೀಯ ಘಟನೆಗಳಿಗೆ ಬಿಹಾರ ಮತ್ತು ಉತ್ತರಪ್ರದೇಶ ಹಿಂದಿನಿಂದಲೂ ಹೆಸರುವಾಸಿ. ಎರಡನೇ ಮದುವೆಯಾಗುವುದಕ್ಕೆ ನಿರಾಕರಿಸಿದ ಮಗನನ್ನು ತಂದೆಯೇ ತನ್ನ ಸಂಬಂಧಿಕರು ಜೊತೆ ಸೇರಿ ಹೊಡೆದು ಸಾಯಿಸಿದ ಅಮಾನವೀಯ ಪ್ರಕರಣ ಬಿಹಾರ್ ದ ಭೋಜಪುರ್ ಜಿಲ್ಲೆಯಿಂದ ಇಂತಹ ಒಂದು ಘಟನೆ ನಡೆದಿದೆ.
ಧರ್ಮೇಂದ್ರ ಚೌಧುರಿ ರಾಜಧಾನಿ ಪಾಟ್ನಾದಿಂದ 60 ಕಿ.ಮೀ ದೂರದ ಭೋಜಪುರ್ ಜಿಲ್ಲೆಯ ಸರೋಪುರ ಹಳ್ಳಿಯ ನಿವಾಸಿ. ಈತನಿಗೆ 2003 ರಲ್ಲಿ ಬುಧಾನ್ ಚೌಧುರಿ ಅನ್ನುವವರ ಮಗಳು ಅನಿತಾ ಕುಮಾರಿ ಜೊತೆ ಮದುವೆ ನಡೆಯಿತು. ಮದುವೆಯಾಗಿ ಆರು ವರ್ಷವಾದರೂ ಮಗನಿಗೆ ಮಕ್ಕಳಾಗಲಿಲ್ಲ ಎನ್ನುವ ಕಾರಣಕ್ಕೆ ಎರಡನೇ ಮದುವೆ ಮಾಡಿಕೋ ಎಂದು ತಂದೆ ಮಗನನ್ನು ಅಗಾಗ ಪೀಡಿಸುತ್ತಿದ್ದ. ತಾನು ತನ್ನ ಹೆಂಡತಿಯೊಂದಿಗೆ ಸುಖವಾಗಿ ಸಂಸಾರ ನಡೆಸುತ್ತಿದ್ದೇನೆ. ಎರಡನೇ ಮದುವೆ ಆಗುವುದಿಲ್ಲ ಎನ್ನುವುದು ಮಗನ ವಾದವಾಗಿತ್ತು. ತಂದೆ ಮತ್ತು ಮಗನಿಗೆ ಈ ವಿಷಯದಲ್ಲಿ ವಾಗ್ದಾದ ನಡೆದಿದೆ. ಕೊನೆಗೂ ಮಗ ಎರಡನೇ ಮದುವೆಗೆ ಒಪ್ಪದಿದ್ದಾಗ ಕೆಂಡಾಮಂಡಲವಾದ ತಂದೆ ತನ್ನ ಬಂಧುಗಳ ಜೊತೆ ಸೇರಿ ಈತನನ್ನು ಸಾಯಿಸಿಬಿಟ್ಟಿದ್ದಾನೆ.
ಈ ಸಂಬಂಧ ಮೃತ ಧರ್ಮೇಂದ್ರನ ಮಾವ ಬುಧಾನ್ ಚೌಧುರಿ ದೂರು ದಾಖಲಿಸಿದ್ದಾರೆ. ಅಳಿಯನ ಸಾವಿಗೆ ಅವನ ಮನೆಯವರೇ ಕಾರಣ ಎಂದು ದೂರಿನಲ್ಲಿ ಹೇಳಿದ್ದಾರೆ. ಅಂದ ಹಾಗೆ ಬಿಹಾರದ ಗ್ರಾಮೀಣ ಪ್ರದೇಶದಲ್ಲಿ ಮದುವೆಯಾಗಿ ಮೂರು ವರ್ಷವಾದರೂ ಮಕ್ಕಳಾಗದಿದ್ದರೆ ಬೇರೊಂದು ಮದುವೆಯಾಗುವ ಪದ್ಧತಿ ಇಂದಿಗೂ ಜಾರಿಯಲ್ಲಿದೆಯಂತೆ !!
(ಏಜನ್ಸೀಸ್)












Click it and Unblock the Notifications