ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಲ್ಟಿಟಿಇ ಉಗ್ರರು ನುಸುಳುವಿಕೆ ಶಂಕೆ : ಕಟ್ಟೆಚ್ಚರ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಗೃಹ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ಕರೆದು ಆದೇಶ ನೀಡಲಾಗಿದೆ ಎಂದರು. ಮಾಜಿ ಪ್ರಧಾನಿ ದಿವಂಗತ ರಾಜೀವ ಗಾಂಧಿ ಹತ್ಯೆ ನಂತರ ಘಟನೆಯ ಪ್ರಮುಖ ರೂವಾರಿಗಳಾದ ಶುಭ, ಶಿವರಸನ್ ಸೇರಿ ಎಂಟು ಮಂದಿ ಎಲ್ ಟಿಟಿಇ ಉಗ್ರರು ಈ ಹಿಂದೆ ಬೆಂಗಳೂರಿನಲ್ಲಿ ಅಡಿಗಿಕೊಂಡಿದ್ದರು. ನಂತರ ಅವರನ್ನು ಎನ್ ಕೌಂಟರ್ ಮೂಲಕ ಹತ್ಯೆ ಮಾಡಲಾಯಿತು. ಇದೀಗ ಎಲ್ ಟಿಟಿಇ ಮುಖ್ಯಸ್ಥ ಪ್ರಭಾಕರನ್ ಅವರನ್ನು ಲಂಕಾ ಸೇನೆ ಕೊಂದು ಮುಗಿಸಿದೆ. ಎಲ್ ಟಿಟಿಇ ಅಷ್ಟೂ ಪ್ರದೇಶವನ್ನು ಲಂಕಾ ಸರಕಾರ ವಶಪಡಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ಉಗ್ರರು ಬೆಂಗಳೂರಿಗೆ ಆಗಮಿಸುವ ಸಾಧ್ಯತೆಯಿದ್ದು, ಭಾರಿ ಭದ್ರತೆಯನ್ನು ಒದಗಿಸಲಾಗಿದೆ ಎಂದು ಆಚಾರ್ಯ ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)
Comments
ಬೆಂಗಳೂರು ಎಲ್ ಟಿಟಿಇ ltte ವಿ ಎಸ್ ಆಚಾರ್ಯ vs acharya ತಮಿಳರು tamils v prabhakaran ವಿ ಪ್ರಭಾಕರನ್ alert ಭದ್ರತೆ
Story first published: Wednesday, May 20, 2009, 15:50 [IST]