ಯುಪಿಎ ಸರಕಾರದ ರಚನೆ ಕಸರತ್ತು ಆರಂಭ

ನವದೆಹಲಿ, ಮೇ. 16 : ನಿರೀಕ್ಷೆಗೂ ಮೀರಿ ದಿಗ್ವಿಜಯ ಸಾಧಿಸಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ರಚನೆಗೆ ಕಸರತ್ತು ಆರಂಭಿಸಿದೆ. ಸಂಪುಟದ ಪ್ರಮುಖ ಖಾತೆಗಳ ಚೌಕಾಶಿ ಆರಂಭವಾಗಿದೆ. ಒಂದು ಮೂಲದ ಪ್ರಕಾರ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಗೆ ಸಂಪುಟ ಸೇರಲು ಭಾರಿ ಒತ್ತಡ ಬರುತ್ತಿದೆ.

ರಾಹುಲ್ ಒಪ್ಪಿದರೆ, ಮಾನವ ಸಂಪನ್ಮೂಲ ಖಾತೆ ಇಲ್ಲವೇ ಗ್ರಾಮೀಣಾಭಿವೃದ್ಧಿ ಖಾತೆ ನೀಡಲು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮನಸ್ಸು ಮಾಡಿದ್ದಾರೆ. ಆದರೆ, ಹಳೆಯ ಮೈತ್ರಿ ಪಕ್ಷಗಳಿಗೆ ಸಚಿವ ಸ್ಥಾನ ನೀಡಲು ಸೋನಿಯಾ ನಿರಾಕರಿಸಿದ್ದಾರೆ ಎನ್ನಲಾಗಿದೆ.

ಕೇಂದ್ರ ಯೋಜನಾ ಆಯೋಗದ ಅಧ್ಯಕ್ಷರಾಗಿರುವ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರಿಗೆ ಅರ್ಥ ಖಾತೆ, ತೃಣಮೂಲ ಕಾಂಗ್ರೆಸ್ ಪಕ್ಷ ನಾಯಕಿ ಮಮತಾ ಬ್ಯಾನರ್ಜಿ, ಪ್ರಣಬ್ ಮುಖರ್ಜಿ ಅವರಿಗೆ ವಿದೇಶಾಂಗ, ಪಿ ಚಿದಂಬರಂ ಅವರಿಗೆ ಗೃಹ ಖಾತೆ, ಎ ಕೆ ಎಂಟನಿ ಅವರಿಗೆ ರಕ್ಷಣಾ ಖಾತೆ ನೀಡುವುದು ಬಹುಕೇತ ಖಚಿತವಾಗಿದೆ.

ಸಂಸದರಾದ ಮುರಳಿ ದಿಯೋರಾ, ವೀರಪ್ಪ ಮೊಯ್ಲಿ, ವೈಯಲಾರ್ ರವಿ, ಸಲ್ಮಾನ್ ಖುರ್ಷಿದ್, ಗಿಲಾಮ್ ನಬಿ ಅಜಾದ್, ಕಮಲನಾಥ್, ಎಸ್ ಎಂ ಕೃಷ್ಣ, ಅಂಬಿಕಾ ಸೋನಿ, ಆನಂದ ಶರ್ಮಾ, ಭಕ್ತ ಚರನ್ ದಾಸ್, ಕಪಿಲ್ ಸಿಬಲ್ ಇವರು ಕಾಂಗ್ರೆಸ್ ಪಕ್ಷದ ಸಂಸದರಾದರೆ, ಜೆಡಿಎಸ್ ನ ಎಚ್ ಡಿ ಕುಮಾರಸ್ವಾಮಿ, ಫಾರೂಕ್ ಅಬ್ದುಲ್ಲಾ, ಶರದ್ ಪವಾರ್, ಪ್ರಫುಲ್ಲ ಪಟೇಲ್, ದಯಾನಿಧಿ ಮಾರನ್, ಎಂ ಕೆ ಅಳಗಿರಿ ಅವರು ಸಚಿವರಾಗುವ ಸಾಧ್ಯತೆಗಳಿವೆ.

(ಏಜನ್ಸೀಸ್)

ರಾಹುಲ್ ಅಲ್ಲ ಸಿಂಗ್ ಅವರೇ ಪ್ರಧಾನಿ : ಸೋನಿಯಾ
ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ
ಲೋಕಸಭೆ ಚುನಾವಣೆ ಲೇಖನಗಳಿಗೆ ಇಲ್ಲಿ ಕ್ಲಿಕ್ಕಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+