ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಧ್ರಪ್ರದೇಶ : ಕಾಂಗ್ರೆಸ್-ಪಿಆರ್ ಪಿ ಮೈತ್ರಿ

By Staff
|
Google Oneindia Kannada News

Chiranjeevi
ಹೈದರಾಬಾದ್, ಮೇ. 15 : ತೃತೀಯರಂಗ ಎನ್ನುವುದು ಒಡೆದ ಮನೆ. ಅದರೊಂದಿಗೆ ನಾವು ಗುರುತಿಸಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ಹೇಳುವ ಮೂಲಕ ತೆಲುಗು ದೇಶಂ ಪಕ್ಷ ತೃತೀಯ ರಂಗದೊಂದಿಗೆ ಸೇರ್ಪಡೆ ಮಾಡಿಕೊಳ್ಳಲು ನಡೆಸಿದ್ದ ಕಸರತ್ತು ತಳ್ಳಿಹಾಕಿರುವ ಪ್ರಜಾರಾಜ್ಯಂ ಪಕ್ಷ, ಫಲಿತಾಂಶದ ನಂತರ ಮೈತ್ರಿಯ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದೆ.

ನೂತನವಾಗಿ ಉದಯವಾಗಿರುವ ಪ್ರಜಾರಾಜ್ಯಂ ಪಕ್ಷ ಲೋಕಸಭೆ ಮತ್ತು ಆಂಧ್ರಪ್ರದೇಶ ವಿಧಾನಸಭೆ ಕ್ಷೇತ್ರ ಅತೀ ಎನ್ನುವುದಕ್ಕಿಂತ ಸರಕಾರ ರಚಿಸಲು ನಾವು ಅನಿವಾರ್ಯ ಎನ್ನುವ ನಿಟ್ಟಿನಲ್ಲಿ ನಮ್ಮ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ. ಚುನಾವಣೆ ನಂತರ ಕೇಂದ್ರ ಮತ್ತು ರಾಜ್ಯ ಸರಕಾರದಲ್ಲಿ ಪ್ರಜಾರಾಜ್ಯಂ ಪಾತ್ರ ಪ್ರಮುಖ ಎನಿಸಲಿದೆ. ಆದ್ದರಿಂದ ಚುನಾವಣೆ ನಂತರ ವಿವಿಧ ಪಕ್ಷಗಳೊಂದಿಗೆ ಮೈತ್ರಿ ಕುರಿತು ಮಾತುಕತೆ ನಡೆಸಲಾಗುವುದು ಎಂದು ಪ್ರಜಾರಾಜ್ಯ ಪಕ್ಷ ಪ್ರಧಾನ ಕಾರ್ಯದರ್ಶಿ ಅಲ್ಲು ಅರವಿಂದ್ ಹೇಳಿದರು.

ಈ ಮಧ್ಯೆ ಮುಖ್ಯಮಂತ್ರಿ ವೈಎಸ್ ಆರ್ ಅವರು ಈಗಾಗಲೇ ಚಿರಂಜೀವಿ ಅವರೊಂದಿಗೆ ಮಾತುಕತೆ ನಡೆಸಿದ್ದು, ರಾಜ್ಯ ಹಾಗೂ ಕೇಂದ್ರ ಸರಕಾರ ಕುರಿತು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಪ್ರಜಾರಾಜ್ಯಂ ಪಕ್ಷದ ನಾಯಕರು ಸ್ಪಷ್ಟವಾಗಿ ಹೇಳಿಕೆ ನೀಡಿಲ್ಲ.

(ಏಜನ್ಸೀಸ್)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X