ವೈದ್ಯರ ನಿರ್ಲಕ್ಷ್ಯ : ಟೆಕ್ಕಿಗೆ 1 ಕೋಟಿ ಪರಿಹಾರ
ನವದೆಹಲಿ, ಮೇ. 14 : ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಿದೆ ಸಾಫ್ಟವೇರ್ ಇಂಜಿನಿಯರೊಬ್ಬರನ್ನು ಶಾಶ್ವತವಾಗಿ ಅಂಗವಿಕಲರನ್ನಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ನ ನಿಜಾಮ್ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಗೆ 1 ಕೋಟಿ ರುಪಾಯಿ ದಂಡವನ್ನು ಸುಪ್ರಿಂಕೋರ್ಟ್ ವಿಧಿಸಿದೆ.
ನ್ಯಾಯಮೂರ್ತಿ ಬಿ ಎನ್ ಅಗರ್ ವಾಲ್, ಜಿ ಎಸ್ ಸಿಂಘ್ವಿ ಹಾಗೂ ಎಚ್ ಎಸ್ ಬೇಡಿ ನೇತೃತ್ವದ ಪೀಠ ಈ ಮಹತ್ವದ ತೀರ್ಪು ನೀಡಿದೆ. ಸಾಫ್ಟವೇರ್ ಇಂಜಿನಿಯರ್ ಪ್ರಶಾಂತ್ ಎಲ್ ಬಾನಕ ಎಂಬುವವರು ನಿಜಾಮ್ ಮೆಡಿಕಲ್ ಇನ್ ಸ್ಟಿಟ್ಯೂಟ್ ಗೆ ವೈದ್ಯಕೀಯ ಚಿಕಿತ್ಸೆಗೆ ಪಡೆದುಕೊಂಡಿದ್ದರು. ಆದರೆ, ವೈದ್ಯರ ನಿರ್ಲಕ್ಷ್ಯದಿಂದ ಅವರು ಶಾಶ್ವತವಾಗಿ ಅಂಗವಿಕಲವಾಗಿದ್ದರು.
ವೈದ್ಯರ ನಿರ್ಲಕ್ಷ್ಯ ಪ್ರಶ್ನಿಸಿದ ಪ್ರಶಾಂತ್ ಆಂಧ್ರಪ್ರದೇಶ ಹೈಕೋರ್ಟ್ ಮೆಟ್ಟಿಲೇರಿದರು. ಅಲ್ಲಿ ಅವರಿಗೆ 15 ಲಕ್ಷ ರುಪಾಯಿ ಪರಹಾರ ನೀಡಬೇಕು ಎಂದು ಮೆಡಿಕಲ್ ಇನ್ ಸ್ಟಿಟ್ಯೂಟ್ ಗೆ ಸೂಚನೆ ನೀಡಿತು. ಇದರಿಂದ ಸಮಾಧಾನಗೊಳ್ಳದ ಪ್ರಶಾಂತ್ ಪ್ರಕರಣವನ್ನು ಸುಪ್ರಿಂಕೋರ್ಟ್ ದಾಖಲಿಸಿದ್ದರು. ಸುಪ್ರಿಂಕೋರ್ಟ್ 1 ಕೋಟಿ ರುಪಾಯಿ ಪರಿಹಾರ ನೀಡಬೇಕು ಎಂದು ಮೆಡಿಕಲ್ ಇನ್ ಸ್ಟಿಟ್ಯೂಟ್ ಗೆ ಆದೇಶ ನೀಡಿದೆ.
(ಏಜನ್ಸೀಸ್)












Click it and Unblock the Notifications