ರಂಗಾಯಣದಲ್ಲಿ ಯುವರಂಗ ತರಬೇತಿ ಶಿಬಿರ
ಮೈಸೂರು, ಮೇ. 13 : ರಂಗಾಯಣವು ಸ್ವೀಡಿಷ್ ಐಟಿಐ ಸಹಯೋಗದಲ್ಲಿ ಮೇ 30 ರಿಂದ ಜೂನ್ 28 ರವರೆಗೆ ಒಂದು ತಿಂಗಳ ಕಾಲ 20 ರಿಂದ 30 ವರ್ಷದೊಳಗಿನ ಆಯ್ದ 30 ಆಸಕ್ತ ಹವ್ಯಾಸಿ ರಂಗಭೂಮಿ ಯುವಕ, ಯುವತಿಯರಿಗಾಗಿ ಮೈಸೂರಿನ ರಂಗಾಯಣದಲ್ಲಿ ರಂಗಭೂಮಿ ಕಾರ್ಯಾಗಾರವನ್ನು ಆಯೋಜಿಸಿದೆ.
ಕಾರ್ಯಾಗಾರವನ್ನು ಖ್ಯಾತ ರಂಗನಿರ್ದೇಶಕ ಪ್ರಮೋದ್ ಶಿಗ್ಗಾಂವ್ ನಡೆಸಲಿದ್ದಾರೆ. ಕಾರ್ಯಾಗಾರದಲ್ಲಿ ಊಟ,ವಸತಿ ಸೌಲಭ್ಯವಿರುತ್ತದೆ. ಆಸಕ್ತರು ಸ್ವವಿವರಗಳನ್ನೊಳಗೊಂಡ ಕೈಬರಹದ ಅರ್ಜಿಯನ್ನು ಭಾವಚಿತ್ರ ಸಹಿತ ದಿನಾಂಕ ಮೇ 21ರೊಳಗೆ ರಂಗಾಯಣ ಕಚೇರಿಗೆ ಸಲ್ಲಿಸುವುದು. ಈಗಾಗಲೇ ರಂಗಶಿಕ್ಷಣ ಹೊಂದಿದವರಿಗೆ ಅವಕಾಶ ಇರುವುದಿಲ್ಲ. ಆಯ್ಕೆಯಾದ ಶಿಬಿರಾರ್ಥಿಗಳು 500 ರುಪಾಯಿ ಪ್ರವೇಶ ಶುಲ್ಕ ಪಾವತಿಸಬೇಕು. ಮೇ 28ರಂದು ಬೆಳಿಗ್ಗೆ 11 ಗಂಟೆಗೆ ರಂಗಾಯಣದಲ್ಲಿ ಸಂದರ್ಶನ ಏರ್ಪಡಿಸಿದೆ. ಅರ್ಜಿ ಸಲ್ಲಿಸಿದವರೆಲ್ಲರೂ ಸಂದರ್ಶನಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗುವುದು. ಹೆಚ್ಚಿನ ವಿವರಗಳಿಗೆ ರಂಗಾಯಣ, ಕಲಾಮಂದಿರ, ವಿನೋಬಾ ರಸ್ತೆ, ಮೈಸೂರು ಕಚೇರಿಯನ್ನು ಅಥವಾ ದೂರವಾಣಿ ಸಂಖ್ಯೆ 0821-2415935,2512629, 2512639ನ್ನು ಸಂಪರ್ಕಿಸಬಹುದಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications