Get Updates
Get notified of breaking news, exclusive insights, and must-see stories!

ಎನ್ಎಸ್ಎ ತೆರವು : ಸುಪ್ರಿಂಕೋರ್ಟ್ ಗೆ ಮಾಯಾ

Varun Gandhi
ನವದೆಹಲಿ, ಮೇ. 12 : ಅಲಹಾಬಾದ್ ಹೈಕೋರ್ಟ್ ನೇಮಿಸಿದ್ದ ಸಲಹಾ ಮಂಡಳಿಯು ಪ್ರಚೋದನಕಾರಿ ಹೇಳಿಕೆ ನೀಡಿದ್ದ ಪಿಲಿಭಿತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಅವರ ಮೇಲಿದ್ದ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ತೆರವುಗೊಳಿಸಿರುವ ಕ್ರಮವನ್ನು ಪ್ರಶ್ನಿಸಿ ಉತ್ತರ ಪ್ರದೇಶದ ಮಾಯಾವತಿ ಸರಕಾರ ಮಂಗಳವಾರ ಸುಪ್ರಿಂಕೋರ್ಟ್ ಮೇಟ್ಟಿಲೇರಿದೆ.

ಅಲಹಾಬಾದ್ ಹೈಕೋರ್ಟ್ ನೇಮಿಸಿರುವ ಸಲಹಾ ಮಂಡಳಿ ತೆಗೆದುಕೊಂಡಿರುವ ತೀರ್ಮಾನ ನ್ಯಾಯ ಸಮ್ಮತವಲ್ಲ. ವರುಣ್ ಗಾಂಧಿ ಚುನಾವಣೆ ಪ್ರಚಾರ ವೇಳೆ ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಅಷ್ಟೂ ಸಾಕ್ಷ್ಯಾಧಾರಗಳನ್ನು ನ್ಯಾಯ ಮಂಡಳಿಗೆ ಒದಗಿಸಲಾಗಿತ್ತು. ಆದರೂ ಕೂಡಾ ಮಂಡಳಿ ವರುಣ್ ಮೇಲೆ ಹೇರಲಾಗಿದ್ದ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ತೆರವುಗೊಳಿಸಿರುವುದು ಸರಿಯಾದ ಕ್ರಮವಲ್ಲ ಎಂದು ಸುಪ್ರಿಂಕೋರ್ಟ್ ಗೆ ಮಾಯಾವತಿ ಸರಕಾರ ವಿವರಿಸಿದೆ.

ಕಳೆದ ಮಾರ್ಚ್ 7 ರಂದು ಉತ್ತರ ಪ್ರದೇಶದ ಪಿಲಿಭಿತ್ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದ ವರುಣ್ ಗಾಂಧಿ, ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಾಯಾವತಿ ಸರಕಾರ ವರುಣ್ ಅವರನ್ನು ಎನ್ ಎಸ್ಎ ಕಾಯ್ದೆಯಡಿ ಬಂಧಿಸಿತ್ತು. ನಂತರ ವರುಣ್ ಜಾಮೀನು ಅರ್ಜಿ ಸಲ್ಲಿಸಿದ್ದರು. ಪೆರೋಲ್ ಮೂಲಕ 15 ದಿನಗಳ ಕಾಲ ನ್ಯಾಯಾಲಯ ವರುಣ್ ಅವರನ್ನು ಬಿಡುಗಡೆಗೊಳಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ವಿಶೇಷ ಸಲಹಾ ಮಂಡಳಿ ರಚಿಸಿತ್ತು. ಏಪ್ರಿಲ್ 28 ರಂದು ಮಂಡಳಿ ಮುಂದೆ ಹಾಜರಾದ ವರುಣ್, ಪ್ರಕರಣ ಕುರಿತು ಸಂಪೂರ್ಣ ವಿವರಣೆ ನೀಡಿದ್ದರು. ನಂತರ ಮಂಡಳಿ ವರುಣ್ ವಿರುದ್ಧ ಉತ್ತರ ಪ್ರದೇಶ ಸರಕಾರ ಹಾಕಿದ್ದ ಎನ್ ಎಸ್ಎ ಕಾಯ್ದೆಯನ್ನು ತೆರವುಗೊಳಿಸಿತ್ತು.

(ಏಜನ್ಸೀಸ್)

ಕಾಂಗ್ರೆಸ್ ಪಕ್ಷ ಹಾಸಿಗೆ ಹಿಡಿದಿದೆ, ವರುಣ್

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+