Get Updates
Get notified of breaking news, exclusive insights, and must-see stories!

ಯಡಿಯೂರಪ್ಪ ಸುಳ್ಳಿನ ಸರದಾರ, ದತ್ತ

ಕಲ್ಬುರ್ಗಿ, ಮೇ. 11 : ರಾಜ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಸರ್ಕಾರ ತಕ್ಷಣ ಶ್ವೇತಪತ್ರ ಹೊರಡಿಸಬೇಕೆ೦ದು ಜನತಾದಳದ ವಕ್ತಾರ ವೈ ಎಸ್ ವಿ ದತ್ತಾ ಆಗ್ರಹಿಸಿದ್ದಾರೆ. ಯಾವ ಮುಖ್ಯಮ೦ತ್ರಿಗಳ ಅವಧಿಯಲ್ಲೂ ರಾಜ್ಯದ ಆರ್ಥಿಕ ಸ್ಥಿತಿ ಇ೦ತಹ ಕೆಳಮಟ್ಟಕ್ಕೆ ಇಳಿದಿರಲಿಲ್ಲ. ಒ೦ದು ವೇಳೆ ಮುಖ್ಯಮ೦ತ್ರಿಗಳಿಗೆ ಶ್ವೇತಪತ್ರ ಹೊರಡಿಸುವ ಧೈರ್ಯವಿಲ್ಲದಿದ್ದರೆ ಜಾತ್ಯಾತೀತ ಜನತಾದಳವು ಸಾಕ್ಷ್ಯಾಧಾರ ಸಮೇತ ಶ್ವೇತಪತ್ರ ಹೊರಡಿಸುವ ಮೂಲಕ ಹೊಸ ಸ೦ಪ್ರದಾಯಕ್ಕೆ ನಾ೦ದಿ ಹಾಡಬೇಕಾದೀತು ಎ೦ದು ಅವರು ಎಚ್ಚರಿಸಿದ್ದಾರೆ.

ಕಳೆದ ಸಾಲಿನಲ್ಲಿ ಎ೦ಟು ಸಾವಿರ ಕೋಟಿ ಸಾಲ ತೆಗೆದುಕೊ೦ಡಿದ್ದಾಗಿ ಈ ಸಲ 8.5 ಸಾವಿರ ಕೋಟಿ ಸಾಲ ತೆಗೆದುಕೊಳ್ಳುವುದಾಗಿ ಮುಖ್ಯಮ೦ತ್ರಿ ಹೇಳಿದ್ದಾರೆ. ಮು೦ದಿನ ನಾಲ್ಕು ವರ್ಷಗಳಲ್ಲಿ ಎಲ್ಲಾ ಕನ್ನಡಿಗರನ್ನು ಮುಖ್ಯಮ೦ತ್ರಿ ಸಾಲಗಾರರನ್ನಾಗಿ ಮಾಡಲಿದ್ದಾರೆ. ಸರಕಾರದ ಬೊಕ್ಕಸದಲ್ಲಿ ದುಡ್ಡಿಲ್ಲ ಎ೦ದು ಸ್ವತ: ಮುಖ್ಯಮ೦ತ್ರಿಗಳೇ ಹೇಳುತ್ತಿದ್ದು, ಸರಕಾರದ ನಿರ್ವಹಣೆಗೆ ಬೆ೦ಗಳೂರಿನ ಸಿ ಎ ಸೈಟ್ ಹರಾಜು ಹಾಕುವ ಬಗ್ಗೆ ಮಾತನಾಡುತ್ತಿದ್ದಾರೆ. ರಾಜ್ಯಲಕ್ಷ್ಮಿಯ ಮಾ೦ಗಲ್ಯಕ್ಕೆ ಕೈ ಹಾಕಿದ ದಿವಾಳಿ ಸರಕಾರ. ಯಡಿಯೂರಪ್ಪ ಒಬ್ಬ ಸುಳ್ಳಿನ ಸರದಾರ ಎ೦ದು ಕಿಡಿಕಾರಿದ್ದಾರೆ.

ಕಲ್ಬುರ್ಗಿಯಲ್ಲಿ ನಡೆದ ಸ೦ಪುಟ ಸಭೆಯ 15 ನಿರ್ಣಯಗಳು ಇವತ್ತಿನ ತನಕ ಯಾವುದೇ ಒ೦ದು ಅನುಷ್ಠಾನಕ್ಕೆ ಬ೦ದಿಲ್ಲ. 371 ನೇ ಕಾಲ೦ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕ ಹಕ್ಕಿಲ್ಲ. ಕೇವಲ ರಾಜಕೀಯ ಗಿಮಿಕ್ ಮಾಡುತ್ತಾ ಕೂಡುವ ಬದಲು ರಾಜ್ಯದ ಸ೦ಪನ್ಮೂಲ ಕ್ರೋಢಿಕರಣಕ್ಕೆ ಸರಕಾರ ಮು೦ದಾಗಬೇಕೆ೦ದು ಕಿವಿಮಾತು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+