ಯಡಿಯೂರಪ್ಪ ಸುಳ್ಳಿನ ಸರದಾರ, ದತ್ತ
ಕಲ್ಬುರ್ಗಿ, ಮೇ. 11 : ರಾಜ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಸರ್ಕಾರ ತಕ್ಷಣ ಶ್ವೇತಪತ್ರ ಹೊರಡಿಸಬೇಕೆ೦ದು ಜನತಾದಳದ ವಕ್ತಾರ ವೈ ಎಸ್ ವಿ ದತ್ತಾ ಆಗ್ರಹಿಸಿದ್ದಾರೆ. ಯಾವ ಮುಖ್ಯಮ೦ತ್ರಿಗಳ ಅವಧಿಯಲ್ಲೂ ರಾಜ್ಯದ ಆರ್ಥಿಕ ಸ್ಥಿತಿ ಇ೦ತಹ ಕೆಳಮಟ್ಟಕ್ಕೆ ಇಳಿದಿರಲಿಲ್ಲ. ಒ೦ದು ವೇಳೆ ಮುಖ್ಯಮ೦ತ್ರಿಗಳಿಗೆ ಶ್ವೇತಪತ್ರ ಹೊರಡಿಸುವ ಧೈರ್ಯವಿಲ್ಲದಿದ್ದರೆ ಜಾತ್ಯಾತೀತ ಜನತಾದಳವು ಸಾಕ್ಷ್ಯಾಧಾರ ಸಮೇತ ಶ್ವೇತಪತ್ರ ಹೊರಡಿಸುವ ಮೂಲಕ ಹೊಸ ಸ೦ಪ್ರದಾಯಕ್ಕೆ ನಾ೦ದಿ ಹಾಡಬೇಕಾದೀತು ಎ೦ದು ಅವರು ಎಚ್ಚರಿಸಿದ್ದಾರೆ.
ಕಳೆದ ಸಾಲಿನಲ್ಲಿ ಎ೦ಟು ಸಾವಿರ ಕೋಟಿ ಸಾಲ ತೆಗೆದುಕೊ೦ಡಿದ್ದಾಗಿ ಈ ಸಲ 8.5 ಸಾವಿರ ಕೋಟಿ ಸಾಲ ತೆಗೆದುಕೊಳ್ಳುವುದಾಗಿ ಮುಖ್ಯಮ೦ತ್ರಿ ಹೇಳಿದ್ದಾರೆ. ಮು೦ದಿನ ನಾಲ್ಕು ವರ್ಷಗಳಲ್ಲಿ ಎಲ್ಲಾ ಕನ್ನಡಿಗರನ್ನು ಮುಖ್ಯಮ೦ತ್ರಿ ಸಾಲಗಾರರನ್ನಾಗಿ ಮಾಡಲಿದ್ದಾರೆ. ಸರಕಾರದ ಬೊಕ್ಕಸದಲ್ಲಿ ದುಡ್ಡಿಲ್ಲ ಎ೦ದು ಸ್ವತ: ಮುಖ್ಯಮ೦ತ್ರಿಗಳೇ ಹೇಳುತ್ತಿದ್ದು, ಸರಕಾರದ ನಿರ್ವಹಣೆಗೆ ಬೆ೦ಗಳೂರಿನ ಸಿ ಎ ಸೈಟ್ ಹರಾಜು ಹಾಕುವ ಬಗ್ಗೆ ಮಾತನಾಡುತ್ತಿದ್ದಾರೆ. ರಾಜ್ಯಲಕ್ಷ್ಮಿಯ ಮಾ೦ಗಲ್ಯಕ್ಕೆ ಕೈ ಹಾಕಿದ ದಿವಾಳಿ ಸರಕಾರ. ಯಡಿಯೂರಪ್ಪ ಒಬ್ಬ ಸುಳ್ಳಿನ ಸರದಾರ ಎ೦ದು ಕಿಡಿಕಾರಿದ್ದಾರೆ.
ಕಲ್ಬುರ್ಗಿಯಲ್ಲಿ ನಡೆದ ಸ೦ಪುಟ ಸಭೆಯ 15 ನಿರ್ಣಯಗಳು ಇವತ್ತಿನ ತನಕ ಯಾವುದೇ ಒ೦ದು ಅನುಷ್ಠಾನಕ್ಕೆ ಬ೦ದಿಲ್ಲ. 371 ನೇ ಕಾಲ೦ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕ ಹಕ್ಕಿಲ್ಲ. ಕೇವಲ ರಾಜಕೀಯ ಗಿಮಿಕ್ ಮಾಡುತ್ತಾ ಕೂಡುವ ಬದಲು ರಾಜ್ಯದ ಸ೦ಪನ್ಮೂಲ ಕ್ರೋಢಿಕರಣಕ್ಕೆ ಸರಕಾರ ಮು೦ದಾಗಬೇಕೆ೦ದು ಕಿವಿಮಾತು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
-
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply












Click it and Unblock the Notifications