2010ಕ್ಕೆ ಮತ್ತೆ ಲೋಕಸಭೆ ಚುನಾವಣೆ
ನವದೆಹಲಿ, ಮೇ. 11 : ದೆಹಲಿ ಗದ್ದುಗೆ ಏರಲು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ತಮ್ಮದೇ ಲೆಕ್ಕಾಚಾರದಲ್ಲಿ ತೊಡಗಿರುವ ಬೆನ್ನಲ್ಲೇ ಜ್ಯೋತಿಷಿಗಳು ತಮ್ಮ ಕರಾಮತ್ತು ತೋರಿಸತೊಡಗಿದ್ದಾರೆ. ಭಾರತ ಸುಪ್ರಸಿದ್ಧ ಜ್ಯೋತಿಷಿಗಳು ಅನುಭವದ ಆಧಾರದ ಮೇಲೆ ಭವಿಷ್ಯ ಹೇಳಿದ್ದು, ಕೇವಲ ಒಂದೂವರೆ ವರ್ಷ ಅಂದರೆ 2010 ರ ಕೊನೆಗೆ ಇಲ್ಲವೇ 2011 ರ ಆರಂಭದಲ್ಲಿ ಭಾರತ ಇನ್ನೊಂದು ಲೋಕಸಭೆ ಚುನಾವಣೆಯಲ್ಲಿ ಎದುರಿಸಲಿದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತಿದೆ ಎಂದಿದ್ದಾರೆ.
ಮೇ 16 ನಂತರ ರಾಷ್ಟ್ರ ರಾಜಕಾರಣದಲ್ಲಿ ಭಾರಿ ರಾಜಕೀಯ ದೃವೀಕರಣ ನಡೆಯಲಿದೆ. ಘಟಾನುಘಟಿ ನಾಯಕರು ಹಾಗೂ ಮುಖಂಡರು ಪಕ್ಷಾಂತರ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ನೂತನ ಸರಕಾರ ಬರಲಿದೆ. ಆದರೆ ಅದರ ಆಯುಷ್ಯ ಕೇವಲ ಒಂದೂವರೆ ವರ್ಷ ಮಾತ್ರ. ಅಂದರೆ 2010 ಕೊನೆಯಲ್ಲಿ ಇಲ್ಲವೇ 2011ರ ಆರಂಭಕ್ಕೆ ಭಾರತ ಅನಿವಾರ್ಯವಾಗಿ ಇನ್ನೊಂದು ಸಾರ್ವತ್ರಿಕ ಚುನಾವಣೆ ಎದುರಿಸಲೆಬೇಕು ಎಂದು ಭವಿಷ್ಯ ನುಡಿದಿದ್ದಾರೆ.
ಈ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬರುವುದಿಲ್ಲ. ಒಂದೇ ಪಕ್ಷ ಸರಕಾರ ರಚಿಸಲು ಸಾಧ್ಯವೇ ಇಲ್ಲ. ಕಾಂಗ್ರೆಸ್ ಇಲ್ಲವೇ ಬಿಜೆಪಿ ಬೆಂಬಲದೊಂದಿಗೆ ತೃತೀಯ ರಂಗ ಅಧಿಕಾರದ ಗದ್ದುಗೆ ಏರುವ ಎಲ್ಲ ಲಕ್ಷಣಗಳೂ ಇವೆ. ಪ್ರಧಾನಿ ಹುದ್ದೆಗಾಗಿ ಭಾರಿ ಲಾಭಿ ನಡೆಯಲಿದೆ. ದೇಶದ ಪಶ್ಚಿಮ ಭಾಗದ ಮುಖಂಡರೊಬ್ಬರು ಪ್ರಧಾನಮಂತ್ರಿ ಆಗಲಿದ್ದಾರೆ ಎಂದು ಖ್ಯಾತ ಜ್ಯೋತಿಷಿ ಅಶೋಕ್ ವಾಸುದೇವ್ ಹೇಳಿದ್ದಾರೆ.
ಮನಮೋಹನ್ ಸಿಂಗ್ ಇಲ್ಲವೇ ಎಲ್ ಕೆ ಅಡ್ವಾಣಿ ಪ್ರಧಾನಿಯಾಗುವ ಕುರಿತಂತೆ ಭವಿಷ್ಯ ಹೇಳಿರುವ ವಾಸುದೇವ್, ಮನಮೋಹನ್ ಸಿಂಗ್ ಅವರಿಗೆ ಇದೇ ಸೆಪ್ಟೆಂಬರ್ ವರೆಗೂ ಸಾಡೇಸಾತಿ ಇದೆ. ಆದ್ದರಿಂದ ಮನಮೋಹನ್ ಸಿಂಗ್ ಇನ್ನೊಂದು ಅವಧಿಗೆ ಪ್ರಧಾನಿಯಾಗುವುದು ಸಾಧ್ಯವಿಲ್ಲ. ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ಎಲ್ ಕೆ ಅಡ್ವಾಣಿ ಕೂಡಾ ಇದರಿಂದ ಹೊರತಲ್ಲ. ಇವರ ಜಾತಕದಲ್ಲಿ ಪ್ರಧಾನಮಂತ್ರಿ ಆಗುವ ಯೋಗವೇ ಇಲ್ಲ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಪ್ರಣಬ್ ಮುಖರ್ಜಿ ಮುಂದಿನ ದಿನಗಳಲ್ಲಿ ಮತ್ತಷ್ಟು ಶಕ್ತಿಶಾಲಿ ನಾಯಕನಾಗಿ ಹೊರಹೊಮ್ಮುವ ಎಲ್ಲ ಲಕ್ಷಣಗಳೂ ಇವೆ. ಅವರೇ ಪ್ರಧಾನಿ ಆದರೂ ಅಚ್ಚರಿ ಇಲ್ಲ. 2012 ರ ನಂತರ ಗುಜರಾತ ಮುಖ್ಯಮಂತ್ರಿ ಬಿಜೆಪಿ ಪಕ್ಷದಲ್ಲಿ ಮುಂಚೂಣಿ ನಾಯಕರಾಗಿ ವಿರಾಜಮಾನರಾಗಲಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಪ್ರಧಾನಿ ಹುದ್ದೆಗೆ ಪ್ರಬಲ ಸ್ಪರ್ಧಿಯಾಗಿ ರೂಪಗೊಳ್ಳಲಿದ್ದಾರೆ ಎಂದು ರಾಜಕೀಯ ತಜ್ಞ ಹಾಗೂ ಜ್ಯೋತಿಷಿ ನವೀನ ಖನ್ನಾ ಹೇಳಿದ್ದಾರೆ. ಆದರೆ ಇನ್ನೊಬ್ಬ ಜ್ಯೋತಿಷಿ ಮುಖೇಶ್ ಜೈನ್ ಪ್ರಕಾರ್, ಮೇ 16 ನಂತರ ಕೇಂದ್ರದಲ್ಲಿ ನೂತನ ಸರಕಾರ ರಚನೆಯಾಗಲಿದೆ. ಆದರೆ, ಇದೇ ವರ್ಷ ಅಗಸ್ಟ್ ತಿಂಗಳು ಸರಕಾರಕ್ಕೆ ಅಪಾಯಕ್ಕೆ ಸಿಲುಕುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
(ಎಜೆನ್ಸೀಸ್)
ಅಡ್ವಾಣಿ
ಪ್ರಧಾನಿ
ಆಗಲ್ಲ,
ಕೋಡಿಮಠ
ಶ್ರೀಗಳು
ಚುನಾವಣಾ
ಭವಿಷ್ಯ
ಹೇಳಿ
ರು.10
ಲಕ್ಷ
ಗೆಲ್ಲಿ
!!