ಅಡ್ವಾಣಿ ಪ್ರಧಾನಿ ಆಗಲ್ಲ, ಕೋಡಿಮಠ ಶ್ರೀಗಳು

ಸದ್ಯ ಲೋಕಸಭೆ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷ ಸ್ಪಷ್ಟ ಬಹುಮತದಿಂದ ಆಡಳಿತ ನಡೆಸಲು ಸಾಧ್ಯವಿಲ್ಲ. ಬಿಜೆಪಿ ಹೆಚ್ಚು ಸ್ಥಾನ ಗಳಿಸಿದರೂ ಸರಕಾರ ರಚಿಸಲು ವಿಫಲವಾಗುತ್ತದೆ. ತೃತೀಯ ಮತ್ತು ಚತುರ್ಥ ರಂಗಗಳು ಬಲಗೊಂಡು ಕೇಂದ್ರದಲ್ಲಿ ಸರಕಾರ ರಚಿಸಲು ಮುಂದಾಗುತ್ತವೆ. ಆದ ಕಾಂಗ್ರೆಸ್ ಜಾತ್ಯಾತೀತ ಪಕ್ಷಗಳನ್ನು ಒಳಗೊಂಡ ರಾಜಕೀಯ ಧೃವೀಕರಣಕ್ಕೆ ಮನ್ನಣೆ ನೀಡಿ ಸರಕಾರ ರಚನೆಹೆ ಬೆಂಬಲ ನೀಡುತ್ತವೆ ಎಂದು ಅವರು ವಿವರಿಸಿದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಿಂದ ಸಿಡಿದು ಹೊರಬಿದ್ದ ಪಕ್ಷಗಳೇ ಸರಕಾರ ರಚನೆಗೆ ಮುಂದಾಗುತ್ತವೆ. ಪ್ರಧಾನಿ ಹುದ್ದೆಗೆ ಭಾರಿ ಪೈಪೋಟಿ ನಡೆಯಲಿದೆ. ಮಹಿಳೆಯೊಬ್ಬರು ಪ್ರಧಾನಿಯಾಗಿುವ ಅವಕಾಶ ಹೆಚ್ಚಾಗಿದೆ. ಅಧಿಕಾರ ಗಳಿಸಿದರೂ ಸರಕಾರ ಸುಭದ್ರವಾಗಿರುವುದಿಲ್ಲ. ಏನೆಲ್ಲ ಕಸರತ್ತು ನಡೆಸಿದರೂ ಸರಕಾರದ ಆಯಸ್ಸು ಕೇವಲ ಎರಡು ವರ್ಷ ಮಾತ್ರ ಎಂದು ಸ್ವಾಮೀಜಿಗಳು ಹೇಳಿದ್ದಾರೆ.
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಲ್ ಕೆ ಅಡ್ವಾಣಿ ಅವರಿಗೆ ಪ್ರಧಾನಿ ಆಗುವ ರಾಜಯೋಗವಿಲ್ಲ. ಬಿಜೆಪಿ ಮತ್ತು ಮಿತ್ರ ಪಕ್ಷಗಳು ಹೆಚ್ಚು ಸ್ಥಾನ ಗಳಿಸಿದರೂ ಸರಕಾರ ರತನೆಗೆ ಸಾಕಾಗಲ್ಲ. ಏನೆಲ್ಲ ಸಾಹಸ ಮಾಡಿ ಅಧಿಕಾರಕ್ಕೆ ಬಂದರೂ ಮೂರು ತಿಂಗಳು ಅಧಿಕಾರ ನಡೆಸಬಹುದಿತ್ತು. ಅದೀಗ ಅದಕ್ಕೂ ಕಾಲ ಮಿಕ್ಕಿದೆ. ಹೀಗಾಗಿ ಅಡ್ವಾಣಿ ಪ್ರಧಾನಿ ಆಗಲು ಸಾಧ್ಯವೇ ಇಲ್ಲ ಎಂದು ಸ್ವಾಮೀಜಿಗಳು ಖಡಾಖಂಡಿತವಾಗಿ ಹೇಳಿದ್ದಾರೆ.
ರಾಜ್ಯದ ಯಡಿಯೂರಪ್ಪ ನೇತೃತ್ವದ ಸರಕಾರಕ್ಕೆ ಭಾರಿ ಅಪಾಯ ಕಾದಿದೆ. ಮಾಸಾಂತ್ಯದ ನಂತರ ಇಕ್ಕಟ್ಟಿಗೆ ಸಿಲುಕಿ ಸರಕಾರ ಪತನವಾಗುವ ಸಾಧ್ಯತೆಗಳೂ ಇವೆ. ಈ ಸಂದರ್ಭದಲ್ಲಿ ಉಳಿದರೂ ಮುಂದಿನ ಡಿಸೆಂಬರ್ ಒಳಗೆ ಸರಕಾರದ ಪತನವಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಲೂಧಿಯಾನಾದಲ್ಲಿ ಎನ್ ಡಿಎ ಶಕ್ತಿ ಪ್ರದರ್ಶನ












Click it and Unblock the Notifications