ಮೈಸೂರು ಅರಮನೆಗೆ ರಾಷ್ಟ್ರಪತಿ ಭೇಟಿ

ಮೈಸೂರು ಅರಮನೆಯ ಬೊಂಬೆ ತೊಟ್ಟಿ , ಚಿನ್ನದ ಅಂಬಾರಿ, ದಸರಾ ಮೆರವಣಿಗೆಯ ಚಿತ್ರಗಳು, ಕಲ್ಯಾಣ ಮಂಟಪ, ರಾಜ-ಮಹಾರಾಜರ ಛಾಯಾಚಿತ್ರಗಳು, ಶಸ್ತ್ರಾಗಾರಗಳನ್ನು ರಾಷ್ಟ್ರಪತಿಗಳು ವೀಕ್ಷಿಸಿದರು. "ಮನಸ್ಸಿನಲ್ಲಿ ಬಹುಕಾಲ ಉಳಿಯಬಹುದಾದ ವಾಸ್ತುಶಿಲ್ಪ ಹಾಗೂ ಕಲಾಕೃತಿಗಳನ್ನು ಈ ಅರಮನೆ ಒಳಗೊಂಡಿದೆ. ಅರಮನೆಯನ್ನು ಸಂರಕ್ಷಿಸಿರುವ ರೀತಿ ಗಮನಾರ್ಹವಾದುದಾಗಿದೆ. ನಮ್ಮ ಉಜ್ವಲ ಪರಂಪರೆ ಹಾಗೂ ಇತಿಹಾಸವನ್ನು ಈ ಅರಮನೆ ನೆನಪಿಗೆ ತರುತ್ತದೆ" ಎಂದು ಹರ್ಷ ವ್ಯಕ್ತಪಡಿಸಿದರು. ಗ್ಯಾನಿ ಜೇಲ್ ಸಿಂಗ್ ನಂತರ ಮೈಸೂರು ಅರಮನೆಗೆ ಭೇಟಿ ನೀಡಿರುವ ಎರಡನೇ ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್.
(ದಟ್ಸ್ ಕನ್ನಡ ವಾರ್ತೆ)
ಮಹಿಳಾ ಸಬಲೀಕರಣಕ್ಕೆ ರಾಷ್ಟ್ರಪತಿ ಕರೆ












Click it and Unblock the Notifications