ಅಧಿಕಾರ ಸಿಕ್ಕರೆ ಕಾವೇರಿಗೆ ಅದ್ಯತೆ, ಪಿಎಂ
ಚೆನ್ನೈ, ಮೇ. 10 : ಇದೇ 13 ರಂದು ತಮಿಳುನಾಡಿನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ಮನಮೋಹನ್ ಸಿಂಗ್ ಕಾವೇರಿ ವಿವಾದವನ್ನು ಪ್ರಸ್ತಾಪಿಸಿದ್ದಾರೆ. ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಮಧ್ಯೆ ಕಗ್ಗಂಟಾಗಿರುವ ಸೂಕ್ಷ್ಮವಾದ ವಿಷಯವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಅಗತ್ಯ. ನಾವೇನಾದರೂ ಮತ್ತೆ ಅಧಿಕಾರಕ್ಕೆ ಬಂದರೆ ಈ ವಿವಾದ ಬಗೆಹರಿಸಲು ಅದ್ಯತೆ ನೀಡುತ್ತೇವೆ ಎಂದರು. ಕಾವೇರಿ ವಿವಾದಕ್ಕೆ ಪರಿಹಾರ ಕಂಡುಹಿಡಿಯಲು ಈಗಾಗಲೇ ಸಾಕಷ್ಟು ಯತ್ನಗಳು ನಡೆದಿವೆ ಎಂದು ಹೇಳಲು ಅವರು ಮರೆಯಲಿಲ್ಲ.
ಭಾರತದಂಥ ದೇಶಗಳಿಗೆ ಉದ್ಯೋಗಾವಕಾಶಗಳ ಹೊರಗುತ್ತಿಗೆ ನೀಡುವುದರಿಂದ ತನ್ನ ಉದ್ಯಮ ಸಂಸ್ಥೆಗಳಿಗೆ ಲಾಭವೇ ಆಗಲಿದೆ ಎಂಬುದನ್ನು ಅಮೆರಿಕ ಕೆಲವೇ ದಿನಗಳಲ್ಲಿ ಮನವರಿಕೆ ಮಾಡಿಕೊಳ್ಳಲಿದೆ ಎಂದು ಪ್ರಧಾನಿ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications