ಭಾರತದ ದೋಸ್ತಿಗೆ ಮುಂದಾದ ಪಾಕ್
ವಾಷಿಂಗ್ ಟನ್, ಮೇ. 8 : ಮುಂಬೈ ಭಯೋತ್ಪಾದನೆ ನಂತರ ಸಂಪೂರ್ಣ ಹದಗೆಟ್ಟು ಹೋಗಿರುವ ಭಾರತ- ಪಾಕಿಸ್ತಾನ ಸಂಬಂಧಗಳಿಗೆ ತೇಪೆ ಹಾಕಲು ಪಾಕ್ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಮುಂದಾಗಿದ್ದಾರೆ. ಭಾರತ-ಪಾಕಿಸ್ತಾನ ದೇಶಗಳ ಸಂಬಂಧ ವೃದ್ಧಿಗೆ ಅಮೆರಿಕ ಸಹಕರಿಸಬೇಕು ಎಂದಿರುವ ಜರ್ದಾರಿ, ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯುತ್ತಿವೆ. ಚುನಾವಣೆ ನಂತರ ಆ ದೇಶದ ಮುಖಂಡರೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.
ಅಮೇರಿಕ ಭೇಟಿ ನೀಡಿರುವ ಜರ್ದಾರಿ ಇಂದು ವಾಷಿಂಗ್ ಟನ್ನಿನ ಕ್ಯಾಪಿಟಲ್ ಹಿಲ್ ನಲ್ಲಿ ಅಮೆರಿಕ ಸೆನೆಟರ್ ಜಾನ್ ಕೆರ್ರಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು. ಭಾರತದ ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ದೇಶ. ಇದೀಗ ಅಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯುತ್ತಿವೆ. ಚುನಾವಣೆ ನಂತರ ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ನಾವು ಎದುರು ನೋಡುತ್ತಿದ್ದು, ಇದಕ್ಕೆ ಅಮೆರಿಕ ಸಹಕರಿಸಬೇಕು ಎಂದು ಜರ್ದಾರಿ ಮನವಿ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅಫಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜಾಯ್ ಉಪಸ್ಥಿತರಿದ್ದರು.
(ಏಜನ್ಸೀಸ್)
ಹೊರಗುತ್ತಿಗೆಗೆ ತೆರಿಗೆ ವಿನಾಯಿತಿ ಇಲ್ಲ : ಒಬಾಮಾ