ಸಾಫ್ಟ್ ವೇರ್ ದಂಪತಿ ಮೇಲೆ ಪುಂಡರ ಹಲ್ಲೆ
ಬೆಂಗಳೂರು, ಮೇ.2: ರಸ್ತೆಯಲ್ಲಿ ಹೋಗುತ್ತಿದ್ದ ಸಾಫ್ಟ್ ವೇರ್ ದಂಪತಿಯನ್ನು ಚುಡಾಯಿಸಿ, ಹಲ್ಲೆ ನಡೆಸಿದ ಮೂವರು ಪುಂಡರನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ಆಂಧ್ರ ಪ್ರದೇಶ ಮೂಲದ ರಘುನಾಥ ಚಾವಾ ಮತ್ತು ಸೌಜನ್ಯ ಎಂಬ ಸಾಫ್ಟ್ ವೇರ್ ದಂಪತಿಗಳು ಗೋವಿಂದರಾಜ ಪಾಳ್ಯದ ಮೇಲ್ಸೆತುವೆ ಬಳಿ ಶುಕ್ರವಾರನಡೆದು ಹೋಗುತ್ತಿದ್ದರು.ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ಮೂವರು ಪುಂಡರು ಸೌಜನ್ಯ ಅವರನ್ನು ಚುಡಾಯಿಸಿದರು. ಅದನ್ನು ವಿರೋಧಿಸಿದ ರಘುನಾಥ್ ಗೆ ಹಿಗ್ಗಾಮುಗ್ಗ್ಗ ಥಳಿಸಿ ಪರಾರಿಯಾದರು.
ಗಾಯಗೊಂಡ ರಘುನಾಥ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ನಂತರ ಅವರು ಪೊಲೀಸರಿಗೆ ದೂರು ನೀಡಿದರು. ಚುಡಾಯಿಸಿ ಹಲ್ಲೆ ಮಾಡಿದ ಪುಂಡರನ್ನು ಪತ್ತೆ ಹಚ್ಚಿದ ಪೊಲೀಸರು ದಾಮೋದರ, ನಾಗರಾಜ ಎಂಬುವವರನ್ನು ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications