ರಾಮಮಂದಿರ ನಿರ್ಮಾಣ ಶತಸಿದ್ಧ : ರಾಜನಾಥ್ ಸಿಂಗ್
ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಮಮಂದಿರ ನಿರ್ಮಾಣ ವಿಷಯವನ್ನು ಕೈಬಿಡಲಿದೆ ಎಂದು ವಿರೋಧಿ ಪಕ್ಷಗಳು ಮಾಡುತ್ತಿರುವ ಅರೋಪವನ್ನು ಅವರು ತಳ್ಳಿಹಾಕಿದರು. ಕೆಲ ರಾಜಕೀಯ ಮುಖಂಡರು ಬಿಜೆಪಿ ವಿರುದ್ದ ಸುಳ್ಳು ಅಪಾದನೆ ಮಾಡುತ್ತಿದ್ದಾರೆ. ಸಮಸ್ತ ಹಿಂದೂಗಳಿಗೆ ಆಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವುದು ಕನಸಾಗಿದೆ. ಆ ಕನಸನ್ನು ಈಡೇರಿಸಲು ಈ ಸಾರಿ ಬಿಜೆಪಿ ಶಕ್ತಿ ಮೀರಿ ಹೋರಾಟ ನಡೆಸಲಿದೆ ಎಂದು ಅವರು ಹೇಳಿದರು.
ಕಂದಾಹಾರ್ ವಿಮಾನ ಅಪಹರಣವನ್ನು ಸಂಪೂರ್ಣ ಹೊಣೆಗಾರಿಕೆಯನ್ನು ಕಾಂಗ್ರೆಸ್ ಪಕ್ಷದ ನಾಯಕರು ಬಿಜೆಪಿ ಮೇಲೆ ಹಾಕುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರಾಜನಾಥ್ ಸಿಂಗ್, ಅಪಹರಣಕ್ಕೆ ಒಳಗಾಗಿದ್ದ ಅಮಾಯಕರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಲು ಈ ಕ್ರಮ ಕೈಗೊಳ್ಳಲಾಯಿತು. ಇದಕ್ಕೂ ಮುನ್ನ ಉಗ್ರರ ಬಿಡುಗಡೆ ಕುರಿತು ಸರ್ವ ಪಕ್ಷಗಳ ಸಭೆ ಕರೆದು ತೀರ್ಮಾನಿಸಲಾಗಿದೆ ವಿನಃ ಬಿಜೆಪಿ ಸರಕಾರದ ನಿರ್ಧಾರವಲ್ಲ ಎಂದರು.
ಉಗ್ರರ ಬಗ್ಗೆ ಕಾಂಗ್ರೆಸ್ ಪಕ್ಷ ತಾಳಿರುವ ಮೃದುಧೋರಣೆ ಹಾಗೂ ಗಗನಕ್ಕೇರಿರುವ ಅಗತ್ಯ ವಸ್ತುಗಳ ಬೆಲೆಗಳು ಜನಸಾಮಾನ್ಯರನ್ನು ಕೆಂಗಡಿಸಿವೆ. ಆದ್ದರಿಂದ ಈ ಚುನಾವಣೆಯಲ್ಲಿ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ ಎಂದು ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
(ಏಜನ್ಸೀಸ್)