ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ಯಾಗ್ರಹ ಕೈಬಿಡುವಂತೆ ಕರುಣಾನಿಧಿಗೆ ಪಿಎಂ ಮನವಿ

By Staff
|
Google Oneindia Kannada News

ನವದೆಹಲಿ, ಏ. 27 : ಶ್ರೀಲಂಕಾ ಸರಕಾರ ಎಲ್ ಟಿಟಿಇ ವಿರುದ್ದ ಸಾರಿರುವ ಕದನ ವಿರಾಮಕ್ಕೆ ಒತ್ತಾಯಿಸಿ ತಮಿಳುನಾಡು ಮುಖ್ಯಮಂತ್ರ ಎಂ ಕರುಣಾನಿಧಿ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿರುವುದಕ್ಕೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಕರುಣಾನಿಧಿ ಉಪವಾಸ ಸತ್ಯಾಗ್ರಹ ಮಾಡಲು ಮುಂದಾಗ ತಕ್ಷಣ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಕರುಣಾನಿಧಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಉಪವಾಸ ಸತ್ಯಾಗ್ರಹ ಕೈಬಿಡಿ. ಶ್ರೀಲಂಕಾದಲ್ಲಿ ನಡೆಯುತ್ತಿರುವ ಕದನ ವಿರಾಮಕ್ಕೆ ಬೇಕಾಗಿರುವ ಎಲ್ಲ ಕ್ರಮಗಳನ್ನು ಕೇಂದ್ರ ಸರಕಾರ ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ. ಪ್ರಧಾನಿ ಮಾತು ಲೆಕ್ಕಿಸದ ಕರುಣಾನಿಧಿ ತಮ್ಮ ಉಪವಾಸ ಮುಂದುವರೆಸಿದ್ದಾರೆ.

ವಯೋವೃದ್ದ ಕರುಣಾನಿಧಿ ಆರೋಗ್ಯದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ ಮನಮೋಹನ್ ಸಿಂಗ್, ಶ್ರೀಲಂಕಾದಲ್ಲಿರುವ ತಮಿಳು ನಿರಾಶ್ರಿತರ ರಕ್ಷಣೆಗೆ ಶ್ರೀಲಂಕಾ ಸರಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಕಳೆದ ಒಂದು ವಾರದಿಂದ ಅಧಿಕೃತವಾಗಿ ಶ್ರೀಲಂಕಾ ಸರಕಾರ ಎಲ್ ಟಿಟಿಇ ಉಗ್ರರ ವಿರುದ್ಧ ಸಮರ ಸಾರಿದ್ದಾರೆ. ಪ್ರಭಾಕರನ್ ಸಮುದ್ರದ ಮೂಲಕ ಪಲಾಯನಗೈದಿದ್ದಾನೆ ಎಂದು ವರದಿಯಾಗಿದೆ.

(ಏಜನ್ಸೀಸ್)

ತಮಿಳರ ಮೇಲೆ ದಾಳಿ ಖಂಡಿಸಿ ಕರುಣಾನಿಧಿ ಉಪವಾಸ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X