ಬಿಜೆಪಿ ವಿರುದ್ದ ಸೋನಿಯಾ ಮತ್ತೆ ವಾಗ್ದಾಳಿ

BJP totally depended on the direction of RSS: Sonia Gandhi
ಮಂಗಳೂರು, ಏ. 27 : ಹೆಜ್ಜೆ ಹೆಜ್ಜೆಗೂ ಆರ್ಎಸ್ಎಸ್ ನ ಆದೇಶ ಪಾಲಿಸುವ ನಾಯಕರಿಗೆ ಸ್ವಂತಿಕೆಯಿಂದ ಯಾವುದೇ ನಿರ್ಣಯ ಕೈಗೊಳ್ಳುವ ತಾಕತ್ತಿದೆಯೇ ? ಕಾಂಗ್ರೆಸ್ಸಿಗೆ ಇಂತಹ ಯಾವುದೇ ಸಂಘಟನೆ ಅಥವಾ ವ್ಯಕ್ತಿಯ ಆದೇಶ ಪಾಲಿಸುವ ಪರಿಪಾಠವಿಲ್ಲ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಇಲ್ಲಿನ ನೆಹರೂ ಮೈದಾನದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು. ಪ್ರಧಾನಿ ಮನಮೋಹನ್ ಸಿಂಗ್ ಬೇರೆ ಅವರ ಇಶಾರೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಟೀಕಿಸುವ ಬಿಜೆಪಿಗೆ ಸ್ವಂತಿಕೆ ಅನ್ನುವುದೇ ಇದೆಯೇ ಎಂದು ಪ್ರಶ್ನಿಸಿದರು. ಬಿಜೆಪಿ ತನ್ನಲ್ಲಿ ಬಲಿಷ್ಠ ನಾಯಕರಿದ್ದಾರೆ ಎಂದು ಕೊಚ್ಚಿಕೊಳ್ಳುತ್ತದೆ. ಅಧಿಕಾರದಲ್ಲಿದ್ದಾಗಿನ ವೈಫಲ್ಯಗಳನ್ನು ಎಕೆ ಮರೆಮಾಚುತ್ತಿದ್ದಾರೆ ಎಂದು ಸೋನಿಯಾ ಆಕ್ರೋಶ ವ್ಯಕ್ತಪಡಿಸಿದರು.

ಇಂದಿರಾಗಾಂಧಿ, ರಾಜೀವಗಾಂಧಿ ಎಂತಹ ಸಂಕಷ್ಟ ಕಾಲದಲ್ಲೂ ದೃತಿಗೆಟ್ಟವರಲ್ಲ. ರಾಜಿ ಮಾಡಿಕೊಂಡವರಲ್ಲ. ಈ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ನಾಯಕರು ಇರುವ ಪಕ್ಷಕ್ಕೆ ನಿಮ್ಮ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಸೋನಿಯಾ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ವಿದೇಶದಲ್ಲಿರುವ ಕಪ್ಪು ಹಣ ತರುವದಾಗಿ ಹೇಳುವ ಬಿಜೆಪಿಗೆ ಆರು ವರ್ಷ ಅಧಿಕಾರದಲ್ಲಿದ್ದಾಗ ಏಕೆ ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಸರಕಾರ ಈ ಹಿಂದೆಯೇ ಕಾರ್ಯಚರಣೆ ಆರಂಭಿಸಿತ್ತು. ಬಿಜೆಪಿ ಹೇಳಿದ ಹಾಗೆ ಅಧಿಕಾರಕ್ಕೆ ಬಂದ ತಕ್ಷಣ ಹಣ ತರಲು ಸಾಧ್ಯವಿಲ್ಲ. ಅದಕ್ಕೆ ಹಲವು ಪ್ರಕ್ರಿಯೆಗಳಿವೆ. ಅದನ್ನು ಕಾಂಗ್ರೆಸ್ ಸರಕಾರ ಈಗಾಗಲೇ ಆರಂಭಿಸಿದೆ. ಚುನಾವಣೆ ಸಂದರ್ಭದಲ್ಲಿ ಬರೀ ಭಾಷಣ ಬಿಗಿದರೆ ಹಣ ಬಂದು ಬೀಳುವುದಿಲ್ಲ ಎಂದು ಅಡ್ವಾಣಿ ಅವರಿಗೆ ಸೋನಿಯಾ ತಿರುಗೇಟು ನೀಡಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+