ಬಿಜೆಪಿ ಮೀಸಲಾತಿ ವಿರೋಧಿ : ದೇವೇಗೌಡ

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳಿಗೆ ಮೀಸಲು ಬೇಡವೆಂದು ರಾಜ್ಯಸಭೆ ಸದಸ್ಯ ರಾಮಾಜೋಯಿಸ್ ಸುಪ್ರಿಂಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಈ ಬಗ್ಗೆ ತಮಗೇನು ಗೊತ್ತಿಲ್ಲವೆಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳುತ್ತಿದ್ದಾರೆ. ಇದು ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ ಸ್ಥಿತಿಯಂತಾಗಿದೆ ಎಂದು ಲೇವಡಿ ಮಾಡಿದರು.
ಜ್ಯೋತಿಷಿಗಳ ಭವಿಷ್ಯ ಕೇಳುತ್ತಾ ಕೂತರೆ ತಾವು ನಾಮ ಹಾಕಿಕೊಂಡು ಮನೆಯಲ್ಲಿ ಕೂರಬೇಕಾಗುತ್ತದೆ. ರಾಷ್ಟ್ರದ ರಾಜಕೀಯ ಅಧೋಗತಿಗೆ ಇಳಿದಿದ್ದು, ದೇಶದಲ್ಲಿ ಯಪಿಎ ಮಾಯವಾಗತೊಡಗಿದೆ. ಅದಕ್ಕೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಒಳಒಪ್ಪಂದವಾಗಿದೆ ಎಂಬ ಏನೇ ಆರೋಪ ಬಂದರೂ ಪ್ರಚಾರ ಸಂದರ್ಭದ ನಮ್ಮ ಮಾತಿನ ದಾಳಿಯೇ ಅದಕ್ಕೆ ಉತ್ತರ ನೀಡುತ್ತದೆ ಎಂದರು.
ದೇಶದ ಜನತೆ ಎನ್ ಡಿಎ ಹಾಗೂ ಯುಪಿಎ ಸರ್ಕಾರಗಳಿಂದ ಬೇಸತ್ತು ಹೋಗಿದ್ದಾರೆ. ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ತೃತೀಯರಂಗ ರಾಷ್ಟ್ರ ರಾಜಕಾರಣದಲ್ಲಿ ಬಹುಮುಖ್ಯ ಪಾತ್ರ ವಹಿಸಲಿದೆ. ತೃತೀಯ ರಂಗ ಅಧಿಕಾರಕ್ಕೆ ಬಂದಲ್ಲಿ ಶ್ರೀರಾಮಸೇನೆ, ಭಜರಂಗದಳ ಸಂಘಟನೆಗಳು ನಿಷೇಧಿಸುವುದಾಗಿ ಮತ್ತೊಮ್ಮೆ ದೇವೇಗೌಡ ಪುನರುಚ್ಚರಿಸಿದರು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications