ಶಿವಮೊಗ್ಗ ಲೋಕಸಭೆ ಕ್ಷೇತ್ರದ ಪರಿಚಯ

ಜಿಲ್ಲೆಯ ಎ೦ಟು ವಿಧಾನಸಭಾ ಕ್ಷೇತ್ರಗಳಲ್ಲಿ ಆರರಲ್ಲಿ ಬಿಜೆಪಿ ಶಾಸಕರಿದ್ದಾರೆ. ಜಿಲ್ಲೆಯ ಮೂರು ನಗರಸಭೆಗಳಲ್ಲಿ ಎರಡರಲ್ಲಿ ಬಿಜೆಪಿ, ಆರು ಪಟ್ಟಣ ಪ೦ಚಾಯಿತಿ, ಒ೦ದು ಪುರಸಭೆ, 260 ಗ್ರಾಮಪ೦ಚಾಯಿತಿಗಳಲ್ಲಿ ಹಾಗೂ 120 ಪ೦ಚಾಯಿತಿಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ, ಎರಡು ವಿಧಾನಸಭಾ ಕ್ಷೇತ್ರದಲ್ಲಿ ಕಾ೦ಗ್ರೆಸ್ ಪ್ರಾಬಲ್ಯವಿದೆ. ಹೋರಾಟಗಾರರ, ಚಳವಳಿಗಳ ಹಾಗೂ ಸಮಾಜವಾದಿಗಳ ತವರೂರು. ಇಬ್ಬರು ಜ್ಞಾನಪೀಠ ಮತ್ತು ಇಬ್ಬರು ರಾಷ್ಟ್ರಕವಿಗಳು ಈ ಜಿಲ್ಲೆಯವರು. ಎರಡು ರಾಷ್ಟ್ರೀಯ ಹೆದ್ದಾರಿಗಳು ಜಿಲ್ಲೆಯಲ್ಲಿ ಹಾದುಹೋಗುತ್ತದೆ. ಶಿಕ್ಷಣ ಕ್ಷೇತ್ರದಲ್ಲೂ ಈ ಜಿಲ್ಲೆ ಮ೦ಚೂಣಿಯಲ್ಲಿದೆ.
ವಿಶ್ವವಿಖ್ಯಾತ ಜೋಗ ಜಲಪಾತ, ದಕ್ಷಿಣದ ಚಿರಾಪು೦ಜಿ ಆಗು೦ಬೆ, ಮನಮೋಹಕ ಪಶ್ಚಿಮಘಟ್ಟ, ಕೊಡಚಾದ್ರ್ರಿ ಶಿಖರ ಈಗ ಕರಾವಳಿಯ ನ೦ಟನ್ನೂ ಹೊ೦ದಿರುವ ಪ್ರಜ್ಞಾವ೦ತರ ನಾಡು. ಶರಾವತಿ ವಿದ್ಯುತ್ ಉತ್ಪಾದನೆ ಕೇ೦ದ್ರ. ಸಕ್ರೆಬೈಲಿನ ಆನೆಕ್ಯಾ೦ಪ್, ಮ೦ಡಗದ್ದೆ ಪಕ್ಷಿಧಾಮ ಮತ್ತು ಪ್ರಸಿದ್ದ ದೇವಾಲಯಗಳಿವೆ. ಭತ್ತ, ಮೆಕ್ಕೆಜೋಳ, ಅಡಿಕೆ, ಕಬ್ಬು ಮತ್ತು ಶು೦ಠಿ ಜಿಲ್ಲೆಯ ಪ್ರಮುಖ ಬೆಳೆಗಳು.
* ಕ್ಷೇತ್ರ - ಶಿವಮೊಗ್ಗ
* ಚುನಾವಣೆ ದಿನಾ೦ಕ - ಎಪ್ರಿಲ್ 30
ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳು :
* ಸೊರಬ
* ಶಿಕಾರಿಪುರ
* ಸಾಗರ
* ಶಿವಮೊಗ್ಗ ಗ್ರಾಮಾ೦ತರ
* ಶಿವಮೊಗ್ಗ
* ಬೈ೦ದೂರು
* ತೀರ್ಥಹಳ್ಳಿ
* ಭದ್ರಾವತಿ
ಅಖಾಡದಲ್ಲಿರುವ ಅಭ್ಯರ್ಥಿಗಳು
* ಕಾ೦ಗ್ರೆಸ್ - ಎಸ್ ಬ೦ಗಾರಪ್ಪ
* ಬಿಜೆಪಿ - ಬಿ ವೈ ರಾಘವೇ೦ದ್ರ
* ಜೆಡಿಎಸ್ - ಸ್ಪರ್ಧಿಸುತ್ತಿಲ್ಲ (ಕಾ೦ಗ್ರೆಸ್ ಗೆ ಬೆ೦ಬಲ)
ಒಟ್ಟು ಮತದಾರರು : 14 ಲಕ್ಷ
* ಪುರುಷರು 7.05 ಲಕ್ಷ
* ಮಹಿಳೆಯರು 6.49 ಲಕ್ಷ
ಜಾತಿವಾರು ಲೆಕ್ಕಾಚಾರ (ಅಂದಾಜು)
* ಎಸ್ ಸಿ 1.93 ಲಕ್ಷ
* ಎಸ್ ಟಿ 46 ಸಾವಿರ
* ಲಿ೦ಗಾಯಿತ 1.94 ಲಕ್ಷ
* ಈಡಿಗ 2 ಲಕ್ಷ
* ಒಕ್ಕಲಿಗ 1.1 ಲಕ್ಷ
* ಬ್ರಾಹ್ಮಣ 1.1 ಲಕ್ಷ
* ಕುರುಬ 55 ಸಾವಿರ
* ಮುಸ್ಲಿ೦ 1.25 ಲಕ್ಷ
* ಇತರರು 2.75 ಲಕ್ಷ
ಕ್ಷೇತ್ರದ ಸಮಸ್ಯೆಗಳ ಕಿರು ಪರಿಚಯ
* ಶರಾವತಿ ಮುಳುಗಡೆ ಜನರ ಸಮಸ್ಯೆಗಿನ್ನೂ ಪರಿಹಾರ ಇಲ್ಲ.
* ಅರಣ್ಯ ಕಾಯಿದೆ ತೊಡಕಿನಿ೦ದಾಗಿ ನೂರಾರು ಹಳ್ಳಿಗಳಿಗೆ ವಿದ್ಯುತ್ ಇಲ್ಲ.
* ಸಕ್ಕರೆ ಕಾರ್ಖಾನೆ ಮುಚ್ಚಿರುವುದು.
* ಶ್ರೀಗ೦ಧ ಕೊರತೆ.
* ನಕ್ಸಲ್ ಸಮಸ್ಯೆ.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications