ಜಾಫರ್ ಷರೀಫ್ ಮನೆಗೆ ಅಡ್ವಾಣಿ ಭೇಟಿ
ಬೆಂಗಳೂರು, ಏ. 21 : ಮಗನನ್ನು ಕಳೆದುಕೊಂಡು ತೀವ್ರ ಆಘಾತಕ್ಕೆ ಒಳಗಾಗಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ ಕೆ ಜಾಫರ್ ಷರೀಫ್ ಅವರ ಮನೆಗೆ ಬಿಜೆಪಿ ಪ್ರಧಾನಮಂತ್ರಿ ಹುದ್ದೆಯ ಅಭ್ಯರ್ಥಿ ಎಲ್ ಕೆ ಅಡ್ವಾಣಿ ಭೇಟಿ ನೀಡಿ ಸಾಂತ್ವನ ಹೇಳಿದರು.
ಕಳೆದ ಅನೇಕ ವರ್ಷಗಳ ಕಾಲ ಸಂಸತ್ತಿನಲ್ಲಿ ಜೊತೆಯಾಗಿ ಷರೀಫ್ ಜೊತೆಗೆ ಕೆಲಸ ಮಾಡಿರುವೆ. ಮಗನನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿರುವ ಅವರಿಗೆ ಸಾಂತ್ವನ ಹೇಳುವುದು ನನ್ನ ಕರ್ತವ್ಯ ಎಂದು ನನ್ನ ಮನಸ್ಸು ಹೇಳಿತು. ಹೀಗಾಗಿ ಯಾರ ಮರ್ಜಿಗೂ ಕಾಯದೇ ಇಂದು ಷರೀಫ್ ಮನಗೆ ಭೇಟಿ ಸಾಂತ್ವನ ಹೇಳಿರುವುದಾಗಿ ಹೇಳಿದರು.
ಅಡ್ವಾಣಿ ಜೊತೆ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಅನಂತಕುಮಾರ್, ಸಚಿವರಾದ ರಾಮಚಂದ್ರಗೌಡ ಮತ್ತಿತರ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು. ಕಳೆದ ಮೂರು ತಿಂಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಜಾಫರ್ ಷರೀಫ್ ಮಗ ಅಬ್ಧುಲ್ ಕರೀಂ ನಗರದ ಸೇಂಟ್ ಜಾನ್ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications