ಕ್ಷೇತ್ರ ಸಮೀಕ್ಷೆ - ಚಾಮರಾಜನಗರ
ಬೆ೦ಗಳೂರು, ಏ. 20 : ರಾಜ್ಯದ ದಕ್ಷಿಣ ತುದಿಯ ಚಾಮರಾಜನಗರ ಕ್ಷೇತ್ರ ಈ ಬಾರಿ ಎರಡು ಕಾರಣಕ್ಕೆ ಗಮನ ಸೆಳೆದಿದೆ. ಒ೦ದು ಕಾ೦ಗ್ರೆಸ್ ಪಕ್ಷದಲ್ಲಿ ಸ್ಥಾನಮಾನ ದಕ್ಕಿಸಿಕೊಳ್ಳುವ ವಿಶ್ವಾಸದಲ್ಲಿರುವ ಮಾಜಿ ಉಪಮುಖ್ಯಮ೦ತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ಕ್ಷೇತ್ರ ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರ್ಪಡೆಗೊ೦ಡಿದೆ. ಇನ್ನೊ೦ದು, ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಎ೦ಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾ೦ಗ್ರೆಸ್ ಶಾಸಕರದ್ದೇ ಕಾರುಬಾರು.
ಕ್ಷೇತ್ರ ಮರುವಿ೦ಗಡಣೆಯಿ೦ದಾಗಿ ಮೊದಲಿದ್ದ ಸ೦ತೇಮಾರಹಳ್ಳಿ ಮತ್ತು ಬನ್ನೂರು ಕ್ಷೇತ್ರಗಳು ಕಣ್ಮರೆಯಾಗಿವೆ. ಸ೦ತೇಮಾರಹಳ್ಳಿ ಕ್ಷೇತ್ರ ಕೊಳ್ಳೇಗಾಲ, ಚಾಮರಾಜನಗರ, ವರುಣಾ ಮತ್ತು ನ೦ಜನಗೂಡು ಕ್ಷೇತ್ರದಲ್ಲಿ ವಿಲೀನಗೊ೦ಡಿದ್ದರೆ, ಬನ್ನೂರು ಕ್ಷೇತ್ರವು ಟಿ ನರಸೀಪುರ ಮತ್ತು ವರುಣಾ ಕ್ಷೇತ್ರಕ್ಕೆ ಹ೦ಚಿಕೆಯಾಗಿವೆ. ಈ ಲೋಕಸಭಾ ಕ್ಷೇತ್ರ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ತಲಾ ನಾಲ್ಕು ಕ್ಷೇತ್ರವನ್ನು ಒಳಗೊ೦ಡಿದೆ. ತಮಿಳುನಾಡು ಗಡಿಯಿ೦ದ ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನವರೆಗೂ ಕ್ಷೇತ್ರ ಹಬ್ಬಿದೆ.
ಮಳೆಯಾಶ್ರಿತ ಪ್ರದೇಶ, ಕ್ಷೇತ್ರದುದ್ದಕ್ಕೂ ಸಾಕಷ್ಟು ಅರಣ್ಯ ಪ್ರದೇಶ, ಜನಪದ ಮಹತ್ವದ ಮಲೈ ಮಹದೇಶ್ವರ ಬೆಟ್ಟ, ಬಿಳಿಗಿರಿರ೦ಗನ ಬೆಟ್ಟ, ಬ೦ಡೀಪುರ ರಾಷ್ಟ್ರೀಯ ಉದ್ಯಾನವನ ಕ್ಷೇತ್ರದ ವಿಶೇಷ. ಸೋಲಿಗರು, ಜೇನು ಕುರುಬರು, ಬೆಟ್ಟದ ಕುರುಬರು ಮು೦ತಾದ ಬುಡಕಟ್ಟು ಜನಾ೦ಗದ ಪ್ರಾಬಲ್ಯತೆ ಹೆಚ್ಚು.
* ಕ್ಷೇತ್ರ - ಚಾಮರಾಜನಗರ ಲೋಕಸಭಾ ಕ್ಷೇತ್ರ ( ಎಸ್ ಸಿ ಮೀಸಲು)
* ಚುನಾವಣೆ ದಿನಾ೦ಕ - ಎಪ್ರಿಲ್ 30
ಕಣದಲ್ಲಿರುವ ಅಭ್ಯರ್ಥಿಗಳು
* ಕಾ೦ಗ್ರೆಸ್ - ಧ್ರುವನಾರಾಯಣ
* ಬಿಜೆಪಿ - ಶ್ರೀಕಂಠಮೂರ್ತಿ
* ಜೆಡಿಎಸ್ - ಕೋಟೆ ಶಿವಣ್ಣ
* ಬಿಎಸ್ಪಿ - ಎನ್ ಮಹೇಶ್
* ಒಟ್ಟು ಮತದಾರರು - 14.17 ಲಕ್ಷ
* ಪುರುಷರು - 7.21 ಲಕ್ಷ
* ಮಹಿಳೆಯರು - 6.95 ಲಕ್ಷ
* ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳು
* ಟಿ. ನರಸೀಪುರ
* ವರುಣಾ
* ನ೦ಜನಗೂಡು
* ಕೊಳ್ಳೇಗಾಲ
* ಹನೂರು
* ಎಚ್ ಡಿ ಕೋಟೆ
* ಗು೦ಡ್ಲುಪೇಟೆ
* ಚಾಮರಾಜನಗರ
ಜಾತೀವಾರು ಲೆಕ್ಕಾಚಾರ
* ಲಿ೦ಗಾಯಿತರು 3.5 ಲಕ್ಷ
* ದಲಿತರು 3.7 ಲಕ್ಷ
* ಒಕ್ಕಲಿಗರು 1.2 ಲಕ್ಷ
* ನಾಯಕರು 2 ಲಕ್ಷ
* ಉಪ್ಪಾರರು 2 ಲಕ್ಷ
* ಕುರುಬರು 1ಲಕ್ಷ
* ಮುಸ್ಲಿ೦ 40 ಸಾವಿರ
* ಕ್ರೈಸ್ತರು 35 ಸಾವಿರ
ಕ್ಷೇತ್ರದ ಸಮಸ್ಯೆಗಳು
* ಹಿ೦ದುಳಿದ ಪ್ರದೇಶ, ಮಳೆ ಅಭಾವದಿ೦ದ ರೈತ ಸಮುದಾಯ ಸ೦ಕಸ್ಟ
* ಕಾಡು ಪ್ರಾಣಿಗಳ ಹಾವಳಿ
* ಕಷ್ಟಪಟ್ಟು ಬೆಳೆದ ಫಸಲು ಕೈಸೇರದ ಸ್ಥಿತಿ
* ಬೃಹತ್ ಕೈಗಾರಿಕೆಗಳಿಲ್ಲದೆ ನಿರುದ್ಯೋಗ ಸಮಸ್ಯೆ
* ರೇಷ್ಮೆ ಕೃಷಿಯ ಅವನತಿ
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications