ತುಮಕೂರು ಐಟಿ ಕಾಲೇಜಿನಲ್ಲಿ ಚಿರತೆ ಪ್ರತ್ಯಕ್ಷ
ತುಮಕೂರು, ಏ. 18 : ಇಂದು ಬೆಳಗಿನ ಜಾವ ಕುಣಿಗಲ್ ರಸ್ತೆ ಬಳಿಯಿರುವ ಎಸ್ಎಸ್ ಇನ್ ತಾಂತ್ರಿಕ ವಿಶ್ವವಿದ್ಯಾಲಯವನ್ನು ಚಿರತೆ ಪ್ರವೇಶಿಸಿದೆ.
ಅರಣ್ಯ ಇಲಾಖೆ ಮತ್ತು ಪೊಲೀಸ್ ಪಡೆ ಬೆಳಗಿನಿಂದ ಪ್ರಯತ್ನ ನಡೆಸಿದ್ದರೂ ಮಧ್ಯಾಹ್ನದವರೆಗೆ ದಷ್ಟಪುಷ್ಟವಾಗಿರುವ ಗಂಡು ಚಿರತೆಯನ್ನು ಹಿಡಿಯಲು ಸಾಧ್ಯವಾಗಿಲ್ಲ. ಅದನ್ನು ಹಿಡಿಯಲು ಬನ್ನೇರುಘಟ್ಟದಿಂದ ಅರವಳಿಕೆ ತಜ್ಞರು ಕೂಡ ಬಂದಿದ್ದಾರೆ.
ಎಸ್ಎಸ್ಐಟಿ ಪ್ರವೇಶಿಸಿದ ಚಿರತೆ ಒಂದು ಕೋಣೆಯಲ್ಲಿ ಅವಿತುಕೊಂಡಿತ್ತು. ನಂತರ ಗಾಜು ಒಡೆದು ರಸ್ತೆಯನ್ನು ಪ್ರವೇಶಿಸಿದೆ. ಇದರಿಂದ ಭಯಭೀತರಾದ ಜನ ದಿಕ್ಕಾಪಾಲಾಗಿ ಒಡುತ್ತಿದ್ದಾರೆ. ಚಿರತೆಯನ್ನು ನೋಡಲು ಸಾಕಷ್ಟು ಜನ ಸೇರಿರುವುದರಿಂದ ಹತ್ತಿರದ ಕಾಡಿನಿಂದ ನಾಡು ಪ್ರವೇಶಿಸಿರುವ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಮತ್ತು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಪೊಲೀಸ್ ಪೇದೆ ಮತ್ತು ಮತ್ತೊರ್ವನಿಗೆ ಚಿರತೆ ತರಚಿ ಗಾಯ ಮಾಡಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications