ಸೋನಿಯಾ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಡ್ವಾಣಿ ಅವರಿಗೆ ಆರ್ಎಸ್ಎಸ್ ಪ್ರೇರಣೆ ಮತ್ತು ಸ್ಫೂರ್ತಿಯಾಗಿದೆ. ಆದರೆ, ಅವರು ಒಂದು ಕುಟುಂಬಕ್ಕೆ, ಒಬ್ಬ ವ್ಯಕ್ತಿಗೆ ಗುಲಾಮರಾಗಿಲ್ಲ. ಅವರು ಮನಮೋಹನ್ ಸಿಂಗ್ ಅವರಂಥ ವ್ಯಕ್ತಿತ್ವ ಹೊಂದಿಲ್ಲ ಎಂದು ಸೋನಿಯಾಗಾಂಧಿ ವಿರುದ್ಧ ಸುರೇಶಕುಮಾರ್ ತೀವ್ರ ವಾಗ್ದಾಳಿ ನಡೆಸಿದರು.
ಸೋನಿಯಾ ಗಾಂಧಿ ಅವರು ಬೀದರ್ ನ ಕಾಂಗ್ರೆಸ್ ಸಮಾವೇಶದಲ್ಲಿ ನರೇಂದ್ರ ಮೋದಿ ಅವರ ಭಾಷಣ ಶೈಲಿಯನ್ನು ಆನುಸರಿಸಲು ಹೋಗಿ ಸಾರ್ವಜನಿಕರಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಈಗ ನಾನೂ ಕೆಲವು ಪ್ರಶ್ನೆಗಳನ್ನು ಕೇಳುತ್ತೇನೆ. ಅವುಗಳಿಗೆ ಸೋನಿಯಾ ಗಾಂಧಿಯವರಾಗಲೀ, ಕಾಂಗ್ರೆಸ್ ಮುಖಂಡರಾಗಲೀ ಉತ್ತರಿಸದಿದ್ದರೆ ಹಿಟ್ ಅಂಡ್ ರನ್ ರೀತಿಯ ರಾಜಕೀಯವಾಗುತ್ತದೆ ಎಂದು ಅವರು ಲೇವಡಿ ಮಾಡಿದರು.
ಈ ಮಧ್ಯೆ ಹರಪನಹಳ್ಳಿಯಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಇನ್ನೊಬ್ಬ ಸಚಿವ ಕರುಣಾಕರರೆಡ್ಡಿ, ಕಾಂಗ್ರೆಸ್ಸಿಗರು ವಿದೇಶಿ ಮಹಿಳೆಯ ಗುಲಾಮರಾಗಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಅಡ್ವಾಣಿ ಆರ್ ಎಸ್ಎಸ್ ಗುಲಾಮ ಎಂಬ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರೆಡ್ಡಿ, ಕಾಂಗ್ರೆಸ್ಸಿಗರು ವಿದೇಶಿ ಮಹಿಳೆಯ ಗುಲಾಮರು ಎಂದು ಟೀಕಿಸಿದರು.
(ದಟ್ಸ್ ಕನ್ನಡ ವಾರ್ತೆ)
ಅಡ್ವಾಣಿ ಆರ್ಎಸ್ಎಸ್ ಕೈಗೊಂಬೆ : ಸೋನಿಯಾ
ಕಾಂಗ್ರೆಸ್ ನಾಯಕರ ವಿರುದ್ಧ ರಾಜನಾಥ್ ಸಿಡಿಮಿಡಿ












Click it and Unblock the Notifications