ಅಜ್ಮೀರ್ ಸ್ಫೋಟದ ರೂವಾರಿ ಅಭಿನವ್ ಭರತ್

Abhinav Bharat
ಜೈಪುರ್, ಏ. 14 : ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ನಡೆದ ಮಾಲೇಗಾಂವ್ ಸ್ಫೋಟದಲ್ಲಿ ಭಾಗಿಯಾಗಿರುವ ಹಿಂದೂ ಸಂಘಟನೆಯ ಸದಸ್ಯ ಅಭಿನವ್ ಭರತ್ 2007 ರಲ್ಲಿ ನಡೆದ ಅಜ್ಮೀರ್ ಸ್ಫೋಟದಲ್ಲಿ ಭಾಗಿಯಾಗಿರುವುದು ತನಿಖೆಯಿಂದ ದೃಡಪಟ್ಟಿದೆ ಎಂದು ರಾಜಸ್ಥಾನ್ ಭಯೋತ್ಪಾದಕ ನಿಗ್ರಹ ಪಡೆ ಸ್ಪಷ್ಟಪಡಿಸಿದೆ.

ಈ ಕುರಿತು ವಾರ್ತಾವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜಸ್ಥಾನ್ ಎಟಿಎಸ್ ಮುಖ್ಯಸ್ಥ ಕಪಿಲ್ ಗರ್ಗ್, ಮಾಲೇಗಾಂವ್ ಸ್ಫೋಟದ ರೂವಾರಿ ಅಭಿನವ್ ಭರತ್ ಅಜ್ಮೀರ್ ಸ್ಫೋಟದಲ್ಲಿ ಕೈವಾಡವಿರುವುದು ತನಿಖೆಯಿಂದ ತಿಳಿದು ಬಂದಿದೆ. ಮಾಲೇಗಾಂವ್ ಸ್ಫೋಟದ ಪ್ರಮುಖ ಆರೋಪಿ ಶ್ರೀಕಾಂತ್ ಪುರೋಹಿತ್ ಅವರೊಂದಿಗೆ ಸೇರಿಕೊಂಡು ಅಜ್ಮೀರ್ ಸ್ಫೋಟದ ಸಂಚು ರೂಪಿಸಿರುವುದನ್ನು ನಾರ್ಕೋ ಅನಲೀಸಸ್ ಪರೀಕ್ಷೆ ವೇಳೆಯಲ್ಲಿ ಆರೋಪಿ ಅಭಿನವ್ ಭರತ್ ಸ್ಪಷ್ಟಪಡಿಸಿದ್ದಾನೆ ಎಂದು ಗರ್ಗ್ ತಿಳಿಸಿದರು.

ದಯಾನಂದ್ ಪಾಂಡೆ, ಶ್ರೀಕಾಂತ್ ಪುರೋಹಿತ್ ಮತ್ತು ಅಭಿನವ್ ಭರತ್ ಮೂವರು ಸೇರಿಕೊಂಡು ಅಜ್ಮೀರ್ ಸ್ಫೋಟದ ಸಂಚು ರೂಪಿಸಿದ್ದಾರೆ ಎಂದು ಗರ್ಗ್ ತಿಳಿಸಿದರು. 2007 ಅಕ್ಟೋಬರ್ 11 ರಂದು ಅಜ್ಮೀರ್ ನ ಷರೀಫ್ ದರ್ಗಾದ ಬಳಿ ಸ್ಫೋಟ ನಡೆದಿತ್ತು. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಅಶೋಕ್ ಗೇಹಲೋಟ್ ಮುಖ್ಯಮಂತ್ರಿಯಾಗಿದ್ದಾರೆ. ಕಳೆದ ವಿದಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ವಸುಂದರಾ ರಾಜೇ ಸಿಂಧಿಯಾ ನೇತೃತ್ವದ ಬಿಜೆಪಿ ದಾರುಣವಾಗಿ ಸೋತಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+