ಚುನಾವಣೆ ಕಾರ್ಯಕ್ರಮ ಗೈರು : 49 ಜನ ಅಮಾನತು

ಬೆಂಗಳೂರು, ಏ. 14 : ಚಿಕ್ಕಬಳ್ಳಾಪುರ ಲೋಕಸಭಾ ವ್ಯಾಪ್ತಿಯ ದೊಡ್ಡಬಳ್ಳಾಪುರ ಮತ್ತು ಹೊಸಕೋಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 7 ರಂದು ಆಯೋಜಿಸಲಾಗಿದ್ದ ಮತಗಟ್ಟೆ ಅಧ್ಯಕ್ಷಾಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಗಳ ಮೊದಲನೆಯ ಸುತ್ತಿನ ತರಬೇತಿ ಕಾರ್ಯಕ್ರಮಕ್ಕೆ ಹಾಜರಾಗದ 49 ಅಧಿಕಾರಿಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್. ಕೆ. ರಾಜು ಅವರು 1951 ರ ಪ್ರಜಾ ಪ್ರತಿನಿಧಿ ಕಾಯಿದೆಯ ಪರಿಚ್ಛೇದ 134 ರ ಅನ್ವಯ ವಿಚಾರಣೆ ಕಾಯ್ದಿರಿಸಿ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಸಂಬಂಧಿತ ಅಧಿಕಾರಿಗಳ ವಿರುದ್ಧ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡುವಂತೆಯೂ ಅಲ್ಲಿನ ಸಹಾಯಕ ಚುನಾವಣಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಅಮಾನತ್ತಿನಲ್ಲಿರಿಸಿರುವ ಅಧಿಕಾರಿಗಳ ವಿವರ :

ದೊಡ್ಡಬಳ್ಳಾಪುರ ತಾಲ್ಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಮೆಳೆಕೋಟೆಯ ಸಹಾಯಕ ಉಪಾಧ್ಯಾಯ ನಾರಾಯಣ್, ದರ್ಗಾಜೋಗಹಳ್ಳಿಯ ಹಿಂದಿ ಶಿಕ್ಷಕ ಖಲೀಲುಲ್ಲಾ ಖಾನ್, ತೂಬಗೆರೆಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಟಿ. ಎನ್, ಗಂಗಾಂಬಿಕ, ದೊಡ್ಡಬಳ್ಳಾಪುರದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಶಿವಶಂಕರ್, ಕೃಷಿ ಇಲಾಖೆಯ ಕೃಷಿ ಸಹಾಯಕ ವಿ.ವೇಣುಗೋಪಾಲ್, ಸಹಾಯಕ ಉಪಾಧ್ಯಾಯಿನಿ ಕೆ. ಎಸ್. ನಸರತ್ ಫಾತೀಮಾ, ಕೋಡಿಹಳ್ಳಿಯ ಸಹಾಯಕ ಉಪಾಧ್ಯಾಯ ಲಕ್ಷ್ಮೀ ನರಸಿಂಹಯ್ಯ, ದೊಡ್ಡಬೆಳವಂಗಲದ ಸಹಾಯಕ ಉಪಾಧ್ಯಾಯ ನರಸಿಂಹಮೂರ್ತಿ, ದೊಡ್ಡಬೆಳವಂಗಲ ಪ್ರಾಥಮಿಕ ಶಾಲೆಯ ಸಹಾಯಕ ಉಪಾಧ್ಯಾಯ ಹೆಚ್. ರಾಮಯ್ಯ, ಕನಸವಾಡಿಯ ಸಹಾಯಕ ಉಪಾಧ್ಯಾಯಿನಿ ಆರ್. ನಾಗರತ್ನಮ್ಮ, ಪ್ರೌಢ ಶಾಲೆಯ ಸಹಾಯಕ ಉಪಾಧ್ಯಾಯಿನಿ ಕೆ. ಅನಸೂಯ, ಮೆಳೆಕೋಟೆ - ರಾಜಘಟ್ಟದ ದೈಹಿಕ ಶಿಕ್ಷಕ ಕೆ. ಆರ್. ಶಿವಕುಮಾರ್, ದರ್ಗಾಜೋಗಹಳ್ಳಿಯ ಪ್ರೌಢ ಶಾಲೆಯ ಸಹಾಯಕ ಉಪಾಧ್ಯಾಯಿನಿ ಆರ್. ಸುಮಾ, ಪ್ರಾಥಮಿಕ ಶಾಲೆಯ ಸಹಾಯಕ ಉಪಾಧ್ಯಾಯಿನಿ ಶಾಂತಮ್ಮ, ಪ್ರೌಢ ಶಾಲೆಯ ಸಹಾಯಕ ಉಪಾಧ್ಯಾಯ ಬಿ. ಮಂಜುನಾಥ ಜಟ್ಟಜ್ಜ, ಪ್ರೌಢ ಶಾಲೆಯ ಸಹಾಯಕ ಉಪಾಧ್ಯಾಯಿನಿ ಟಿ. ಎಸ್. ಪ್ರಭಾಮಣಿ, ತೂಬಗೆರೆ - ಹಾಡೋನ ಹಳ್ಳಿಯ ಸಹಾಯಕ ಉಪಾಧ್ಯಾಯ ಹೆಚ್. ಎನ್. ಸುಬ್ರಮಣ್ಯ, ಕೆ. ಎಂ. ಮುನಿರಾಜು, ಪ್ರಾಥಮಿಕ ಶಾಲೆಯ ಸಹಾಯಕ ಉಪಾಧ್ಯಾಯ ಬಿ. ಹೆಚ್. ಮಾರುತಿ ಕುಮಾರ್ ಹಾಗೂ

ಸಹಾಯಕ ಉಪಾಧ್ಯಾಯಿನಿ ಎಸ್. ಇಂದಿರಾ, ಲೋಕೋಪಯೋಗಿ ಇಲಾಖೆಯ ಕಿರಿಯ ಅಭಿಯಂತ ಜಿ. ಕೆ. ಚಂದ್ರಶೇಖರ್ ಮತ್ತು ಉಪ ಖಜಾನೆಯ ದ್ವಿತೀಯ ದರ್ಜೆ ಸಹಾಯಕ ಡಿ. ಪ್ರಕಾಶ ಬಾಬು (ಎಲ್ಲರೂ ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರು) ಹಾಗೂ ಸೂಲಿಬೆಲೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ. ಚನ್ನಪ್ಪ, ಉಪನ್ಯಾಸಕ ಕೆ. ಹನುಮಂತರಾಯಪ್ಪ, ಹೊಸಕೋಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಸ್. ಶಂಕರ ನಾರಾಯಣಪ್ಪ, ಶಾಲಾ ಶಿಕ್ಷಕಿ ಯಶೋಧ, ಹಿಂದಿ ಶಿಕ್ಷಕ ಎ. ಬಿ. ದೊಡ್ಡ ಪತ್ತಾರ್,

ನಂದಗುಡಿಯ ಮುಖ್ಯೋಪಾಧ್ಯಾಯಿನಿ ಆಸಿಯಾ ಬೇಗಂ, ಹೊಸಕೋಟೆಯ ಪ್ರೌಢ ಶಾಲೆಯ ಸಹಾಯಕ ಉಪಾಧ್ಯಾಯ ಪರಮೇಶ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಚಂದ್ರಪ್ಪ, ಸಹಾಯಕ ಉಪಾಧ್ಯಾಯ ಸಿ. ಆರ್. ಅರ್ಜುನಗಿ, ಶಿವನಪುರ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಬಿ. ಎಸ್. ಸೌಭಾಗ್ಯಮ್ಮ, ಸಮೇತನ ಹಳ್ಳಿ ಪ್ರೌಢ ಶಾಲೆಯ ಸಹಾಯಕ ಉಪಾಧ್ಯಾಯಿನಿ ಕೆ. ಪಿ. ಯಮುನ, ಸಹಾಯಕ ಉಪಾಧ್ಯಾಯಿನಿ ಟಿ. ಎಂ. ಗೀತಾ, ದೈಹಿಕ ಶಿಕ್ಷಕಿ ಆರ್. ಆಶಾದೇವಿ, ಸಹಾಯಕ ಉಪಾಧ್ಯಾಯಿನಿ ಎ. ಹೇಮಲತಾ, ದೊಡ್ಡ ಹುಲ್ಲೂರು ಸರ್ಕಾರಿ ಪ್ರೌಢ ಶಾ ಲೆಯ ಸಹಾಯಕ ಉಪಾಧ್ಯಾಯ ಸುನೀಲ್ ಮಿಶ್ರಾ, ಹಸಿಗಾಲ ಸರ್ಕಾರಿ ಪ್ರೌಢ ಶಾಲೆಯ ಸಹಾಯಕ ಉಪಾಧ್ಯಾಯಿನಿ ಸಿ. ಜೋಸೆಫಿನ್, ಹೊಸಕೋಟೆಯ ಹಿಂದಿ ಶಿಕ್ಷಕಿ ಖುತೀಜಾ ಸುಲ್ತಾನ, ವಾಗಟದ ಸಹಾಯಕ ಉಪಾಧ್ಯಾಯಿನಿ ಎಂ ಉಜ್ರಾ ಬೇಗಂ, ಸಹಾಯಕ ಉಪಾಧ್ಯಾಯ ಎಂ ಕೃಷ್ಣಮೂರ್ತಿ, ನಂದಗುಡಿಯ ಸರ್ಕಾರಿ ಕಿರಿಯ ಮಹಾವಿದ್ಯಾಲಯದ ಸಹಾಯಕ ಉಪಾಧ್ಯಾಯ ಎಸ್. ಚಂದ್ರ ಕಾಂತ, ಬೇಗೂರು ಸರ್ಕಾರಿ ಪ್ರೌಢ ಶಾಲೆಯ ಸಹಾಯಕ ಉಪಾಧ್ಯಾಯಿನಿ ಎಸ್. ಶ್ಯಾಮಲ, ಬೆಂಡಿಗಾನಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಸಹಾಯಕ ಉಪಾಧ್ಯಾಯಿನಿ ಸಬೀಹಾ ಪರ್ವೀನ್, ಜಡಿಗೇನಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಸಹಾಯಕ ಉಪಾಧ್ಯಾಯಿನಿ ಪಿ. ವಿ. ಸತ್ಯವತಿ, ತಾವರೆಕೆರೆ ಸರ್ಕಾರಿ ಪ್ರೌಢ ಶಾಲೆಯ ಸಹಾಯಕ ಉಪಾಧ್ಯಾಯಿನಿ ಜಿ. ಎಸ್. ಪ್ರೇಮಕುಮಾರಿ, ಸಹಾಯಕ ಉಪಾಧ್ಯಾಯಿನಿ ಸುವರ್ಣ ಹೆಗಡೆ, ಹೊಸಕೋಟೆಯ ಸಹಾಯಕ ಉಪಾಧ್ಯಾಯಿನಿ ಚೆನ್ನದಾಸರ್ ಸುಮಿತ್ರ ಮತ್ತು ಸಹಾಯಕ ಉಪಾಧ್ಯಾಯಿನಿ ರೂಪಾ, (ಎಲ್ಲರೂ ಹೊಸಕೋಟೆಯ ವಿಧಾನ ಸಭಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರು) ಅವರನ್ನು ಅಮಾನತ್ತುಗೊಳಿಸಲಾಗಿದೆ. ಸಂಬಂಧಿತ ಸಂಸ್ಥೆಗಳ ಮುಖ್ಯಸ್ಥರು ಅಮಾನತ್ತುಗೊಳಿಸಿದ ಎಲ್ಲರನ್ನೂ ಕೂಡಲೇ ಕರ್ತವ್ಯದಿಂದ ಬಿಡುಗಡೆ ಮಾಡುವಂತೆಯೂ ತಿಳಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

(ದಟ್ಸ್ ಕನ್ನಡ ವಾರ್ತೆ)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+