ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮುಂಬೈ ನಗರ ಜಾಗತಿಕ ನಗರವನ್ನಾಗಿ ಪರಿವರ್ತನೆ
ಚುನಾವಣೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದ ಸಿಂಗ್, ಕಾಂಗ್ರೆಸ್ ಪಕ್ಷ ಮತ್ತು ಮಹಾರಾಷ್ಟ್ರದ ಜನತೆಗೆ ಬಿಡಿಸಲಾರದ ಸಂಬಂಧವಿದೆ. ಅದು ಇನ್ನಷ್ಟು ಗಟ್ಟಿಗೊಳಿಸುವಂತ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಅದಕ್ಕೆ ನಿಮ್ಮ ಆಶೀರ್ವಾದ ಅಗತ್ಯ ಎಂದರು. ಕಾಂಗ್ರೆಸ್ ನೇತೃತ್ವದ ಕೇಂದ್ರದ ಯುಪಿಎ ಸರ್ಕಾರದಿಂದ ಮಾತ್ರ ದೇಶದ ಕಟ್ಟಲು, ಸಾಮರಸ್ಯ ಕಾಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ಮತದಾರರೇ ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡಿ ಎಂದು ಮನವಿ ಮಾಡಿಕೊಂಡರು.
ಕಳೆದ ಐದು ವರ್ಷದಲ್ಲಿ ಯುಪಿಎ ಸರ್ಕಾರ ಯಾರೂ ಮಾಡದ ಸಾಧನೆ ಮಾಡಿದೆ. ಗ್ರಾಮೀಣ ಪ್ರದೇಶದ ಮೂಲಭೂತ ಸೌಕರ್ಯಗಳು ಹಾಗೂ ರೈತರ ಸಾಲ ಮನ್ನಾ ನಮ್ಮ ಸರ್ಕಾರ ಅತ್ಯಮೂಲ್ಯ ಕೊಡುಗೆ ಎಂದು ಸಿಂಗ್ ಬೆನ್ನುತಟ್ಟಿಕೊಂಡರು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು
Comments
mumbai ಮುಂಬೈ ಕಾಂಗ್ರೆಸ್ congress ಮನಮೋಹನ್ ಸಿಂಗ್ manmohan singh ಸೋನಿಯಾ ಗಾಂಧಿ sonia gandhi lok sabha election 2009 ಲೋಕಸಭೆ ಚುನಾವಣೆ 2009
Story first published: Monday, April 13, 2009, 14:49 [IST]