ಅಡ್ವಾಣಿ ವಿರುದ್ಧ ಮನಮೋಹನ್ ಸಿಂಗ್ ಪ್ರತಿದಾಳಿ

ಅಡ್ವಾಣಿ ತಮ್ಮನ್ನು ಅಸಮರ್ಥ ಪ್ರಧಾನಮಂತ್ರಿ ಎಂದು ಟೀಕಿಸಿರುವುದುಕ್ಕೆ ಪ್ರತಿಯಾಗಿ ದಾಳಿ ನಡೆಸಿದ ಪ್ರಧಾನಿ ಸಿಂಗ್, ನಿಂದನೆ ಭಾಷೆ ಬಳಸುವುದು ನನ್ನ ಜಾಯಮಾನವಲ್ಲ. ಇಂಥದೊಂದು ಸಂಸ್ಕತಿ ಹಾಗೂ ಭಾರತೀಯತೆಯನ್ನು ನನ್ನ ಪಾಲಕರು ಮತ್ತು ಗುರುಗಳಿಂದ ಕಲಿತಿದ್ದೇನೆ ಎಂದಿದ್ದಾರೆ. ಅಮೆರಿಕ ಶೈಲಿಯ ರಾಷ್ಟ್ರೀಯ ಚರ್ಚೆಗೆ ಅಡ್ವಾಣಿ ನೀಡಲಿರುವ ಸವಾಲಿಗೆ ಪ್ರತಿಕ್ರಿಯಿಸಿದ ಪ್ರಧಾನಿ ಸಿಂಗ್, ನಾನು ಅಡ್ವಾಣಿಯವರಂತೆ ಏರು ಧ್ವನಿಯಲ್ಲಿ ಮಾತನಾಡುವ ಭಾಷಣಕಾರನಲ್ಲ ಎಂದರು.
ಶಾಂತಚಿತ್ತದ ಸಿಂಗ್ ಈ ವಿಷಯದಲ್ಲಿ ಮಾತ್ರ ಕಟುವಾಗಿ ಮಾತನಾಡಿದ್ದಾರೆ. ದೊಡ್ಡ ಧ್ವನಿಯಲ್ಲಿ ಮಾತನಾಡುವುದನ್ನೇ ಒಬ್ಬ ವ್ಯಕ್ತಿ, ಸಮರ್ಥನೋ, ಅಸಮರ್ಥನೋ ಎಂದು ಬಿಂಬಸಲು ಸಾಧ್ಯವಿಲ್ಲ. ಕಠಿಣ ಭಾಷೆ ಉಪಯೋಗಿಸಿ ಮಾತನಾಡುವುದರಿಂದ ಯಾವ ಸಮಸ್ಯೆಗಳೂ ಪರಿಹಾರವಾಗುವುದಿಲ್ಲ ಎಂದು ಅವರು ಹೇಳಿದರು.
ಸಂಸತ್ತಿನಲ್ಲಿ ಬಿಜೆಪಿ ಸರಿಯಾಗಿ ಚರ್ಚೆಗೆ ಭಾಗವಹಿಸಿಲ್ಲ. ಈಗ ಅಡ್ವಾಣಿ ನನ್ನನ್ನು ಚರ್ಚೆಗೆ ಕರೆಯುತ್ತಿದ್ದಾರೆ. ಇಷ್ಟಕ್ಕೂ ಅಡ್ವಾಣಿ ಅವರ ಸಾಧನೆ ಏನು ? ಅವರಂತೆ ನಾನು ಭಯೋತ್ಪಾದಕರನ್ನು ಭೇಟಿಯಾಗಲು ಸಚಿವರನ್ನು ಕಳುಹಿಸಿರಲಿಲ್ಲ. ಬದಲಿಗೆ ಕಮಾಂಡೋಗಳನ್ನು ಕಳುಹಿಸಿದ್ದೇನೆ ಎಂದು ಪ್ರತಿ ಸವಾಲು ಎಸೆದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications