ಎಲ್ ಟಿಟಿಇಯಿಂದ ದೇಶದ ಪ್ರಮುಖ ನಾಯಕರಿಗೆ ಬೆದರಿಕೆ

ಗೃಹ ಸಚಿವ ಪಿ ಚಿದಂಬರಂ ಈ ವಿಷಯವನ್ನು ಬಹಿರಂಗಪಡಿಸಿದ್ದು, ಹಿಟ್ ಲಿಸ್ಟ್ ನಲ್ಲಿ ಮುಖ್ಯಮಂತ್ರಿಗಳಿಗೆ ಭದ್ರತೆಯನ್ನು ನಿಯೋಜಿಸಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ. ಪ್ರಚಾರ ಕಾರ್ಯಕ್ಕೆ ತೆರಳುತ್ತಿರುವ ಸೋನಿಯಾ ಗಾಂಧಿ ಹಾಗೂ ಎಲ್ ಕೆ ಆಡ್ವಾಣಿ ಅವರಿಗೆ ಭಾರಿ ಭದ್ರತೆ ಕೈಗೊಳ್ಳಲು ಆಯಾ ರಾಜ್ಯಗಳ ಪೊಲೀಸ್ ಇಲಾಖೆ ಮುಖ್ಯಸ್ಥರಿಗೆ ಆದೇಶ ನೀಡಲಾಗಿದೆ. 30ಕ್ಕೊ ಹೆಚ್ಚು ತಾಲಿಬಾನ್ ಉಗ್ರರು ಭಾರತದೊಳಗೆ ಪ್ರವೇಶಿಸಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಈಗಗಾಲೇ ಎಚ್ಚರಿಕೆ ನೀಡಿದೆ.
ಈ ಮಧ್ಯ ಎಡಿಎಂಕೆ ನಾಯಕ ತಮಿಳಿ ಜನಾಂದ ಎತ್ತಿ ಕಟ್ಟಿ ಮತ ಪಡೆಯುವುದಕ್ಕಾಗಿ ಎಲ್ ಟಿಟಿ ನಾಯಕ ವಿ ಪ್ರಭಾಕರನ್ ಅವರ ಹೊಗಳುಭಟ್ಟರಾಗಿದ್ದಾರೆ. ತಮಿಳರ ಆರಾಧ್ಯಧೈವ ಆಗಿರುವ ಪ್ರಭಾಕರನ್ ಗೆ ಜೀವಕ್ಕೆ ಏನಾದರೂ ಅಪಾಯ ಸಂಭವಿಸಿದರೆ, ತಮಿಳುನಾಡಿನಲ್ಲಿ ರಕ್ತ ಓಕುಳಿ ಆಗಲಿದೆ ಎಂದು ಭಾವನೆ ಕೆರಳಿಸುವ ಹೇಳಿಕೆ ಇಂದು ನೀಡಿದ್ದಾರೆ.
ಎಲ್ ಟಿಟಿಇ ದಾಳಿ ನಡೆಸುವ ಸಾಧ್ಯತೆಗಳಿವೆ ಮುಖ್ಯಮಂತ್ರಿ ಪಟ್ಟಿ
ನರೇಂದ್ರ ಮೋದಿ- ಗುಜರಾತ
ರಮಣ್ ಸಿಂಗ್ -ಛತ್ತೀಸ್ ಗಢ
ಬುದ್ಧದೇವ್ ಭಟ್ಟಾಚಾರ್ಯ್-ಪಶ್ಚಿಮ ಬಂಗಾಲ
ಮಾಯಾವತಿ- ಉತ್ತರ ಪ್ರದೇಶ
ಅಶೋಕ ಚವಾಣ್- ಮಹಾರಾಷ್ಟ್ರ
ಓಮರ್ ಅಬ್ದುಲ್ಲಾ-ಜಮ್ಮು ಮತ್ತು ಕಾಶ್ಮೀರ
ಪ್ರಕಾಶ ಸಿಂಗ್ ಬಾದಲ್-ಪಂಜಾಬ
ಎಂ ಕರುಣಾನಿಧಿ-ತಮಿಳುನಾಡು
ಓಕ್ರಮ ಓಬೋಬಿ-ಮಣಿಪುರ್
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications