ಪ್ರಭಾಕರನ್ ಕೂದಲು ಕೊಂಕಿದರೆ ರಕ್ತದೋಕುಳಿ

Prabhakaran lives in the hearts of Tamils: Vaiko
ಚೆನ್ನೈ, ಏ. 9 : ಮಾಜಿ ಪ್ರಧಾನಮಂತ್ರಿ ದಿವಂಗತ ರಾಜೀವ ಗಾಂಧಿ ಹತ್ಯೆ ಮಾಡಿದ ನಿಷೇಧಿತ ಉಗ್ರಗಾಮಿ ಸಂಘಟನೆ ಎಲ್ ಟಿಟಿಇಗೆ ಮರುಮಲಾರ್ಚಿ ದ್ರಾವಿಡ ಮುನ್ನೆತ್ರ ಕಜಗಂ (ಎಂಡಿಎಂಕೆ) ನಾಯಕ ವೈಕೋ ಮತ್ತೊಮ್ಮೆ ಬಹಿರಂಗ ಬೆಂಬಲ ಘೋಷಿಸಿದ್ದಾರೆ. ತಮಿಳರ ಆರಾಧ್ಯದೈವನಾಗಿರುವ ವೇಲುಪಿಲೈ ಪ್ರಭಾಕರನ್ ಅವರ ಕೂದಲು ಕೊಂಕಿದರೂ ಸಹ ತಮಿಳುನಾಡಿನಲ್ಲಿ ರಕ್ತದ ಓಕುಳಿ ಹರಿಯುವುದು ಖಚಿತ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಪ್ರಭಾಕರನ್ ತಮಿಳರ ಹೃದಯದಲ್ಲಿ ಅತ್ಯುನ್ನತ ಸ್ಥಾನ ಪಡೆದುಕೊಂಡಿದ್ದಾನೆ. ಆತನನ್ನು ಅನೇಕ ತಮಿಳರು ದೇವರಿಗಿಂತ ಹೆಚ್ಚಾಗಿ ಪ್ರೀತಿಸಿ, ಪೂಜಿಸುತ್ತಾರೆ. ಇಂತಹ ಮನುಷ್ಯನಿಗೆ ಏನಾದರೂ ಆದಲ್ಲಿ ಭಾರಿ ಅನಾಹುತ ಕಾದಿದೆ ಎಂದು ವೈಕೋ ಹೇಳಿದ್ದಾರೆ. ಚುನಾವಣೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಲೋಕಸಭೆ ಚುನಾವಣೆಯಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ವೈಕೋ ತಮಿಳುನಾಡಿನ ನಾಲ್ಕು ಕ್ಷೇತ್ರಗಳಲ್ಲಿ ಎಡಿಎಂಕೆ ಕಣಕ್ಕಿಳಿಯಲಿದೆ. ಶ್ರೀಲಂಕಾ ಸರ್ಕಾರ ಎಲ್ ಟಿಟಿಇ ನಿರ್ನಾಮ ಮಾಡಬೇಕು ಎಂದು ಅನೇಕ ದಿನಗಳಿಂದ ದಾಳಿ ನಡೆಸಿದೆ. ಎಲ್ ಟಿಟಿಇ ಕೈಯಲ್ಲಿದ್ದ ಬಹುತೇಕ ಪ್ರದೇಶಗಳನ್ನು ಲಂಕಾ ಸರ್ಕಾರ ವಶಪಡಿಸಿಕೊಂಡಿದೆ. ಪ್ರಭಾಕರನ್ ನಾಪತ್ತೆಯಾಗಿದ್ದಾನೆ ಎಂದು ವರದಿಯಾಗಿತ್ತು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+