ವಾಜಪೇಯಿಯಿಂದ ರಾಜಕೀಯ ಕಲಿಯಿರಿ: ಪೂಜಾರಿ

ನಗರದಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಪೂಜಾರಿ, ವಾಜಪೇಯಿ ಅವರು ನೆಹರೂ ಕಾಲದಿಂದ ರಾಜಕೀಯ ಮಾಡಿದವರು, ಪ್ರತಿಪಕ್ಷದಲ್ಲಿದ್ದರು. ಆದರೆ ಅವರಿಂದ ಎಂದೂ ರಾಜಕೀಯದ ಘನತೆಯನ್ನು ಕುಂದಿಲ್ಲ ಎಂದರು. ವಿನಾ ಕಾರಣ ಪ್ರಧಾನಿಯವರನ್ನು ಹೀಗೆಳೆಯುತ್ತಿರಲಿಲ್ಲ. ವಿದೇಶಗಳಿಗೆ ಹೋದಾಗಲೆಲ್ಲಾ ದೇಶದ ಪ್ರಧಾನಿಯನ್ನು ಹೊಗಳಿ ಕೊಂಡಾಡಿದವರು. ಅಂತ ಮುತ್ಸದ್ದಿಯಿಂದ ಆಡ್ವಾಣಿ ಪಾಠ ಕಲಿಯಬೇಕು. ಮನಮೋಹನ್ ಸಿಂಗ್ ರಂಥ ಮುತ್ಸದ್ದಿಯನ್ನು ಹೀಗಳೆಯಬಾರದು ಎಂದು ಆಡ್ವಾಣಿಗೆ ಹಿತವಚನ ನೀಡಿದರು.
ಇತ್ತೀಚೆಗೆ ಎಲ್ ಕೆ ಅಡ್ವಾಣಿ ಅವರು ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ದೇಶ ಕಂಡ ಅತ್ಯಂತ ಅಸಮರ್ಥ ಪ್ರಧಾನಮಂತ್ರಿ ಎಂದು ಲೇವಡಿ ಮಾಡಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications