ದೇವೇಗೌಡ, ಬಂಗಾರಪ್ಪ ನಾಮಪತ್ರ ಸಲ್ಲಿಕೆ

ತೃತೀಯ ರಂಗದ ಮುಂಚೂಣಿ ನಾಯಕ ಎಚ್ ಡಿ ದೇವೇಗೌಡ ಹಾಸನದಿಂದ ತಮ್ಮ ಉಮೇದುವಾರಿಕೆ ಸಲ್ಲಿಸಿದರೆ, ಮೈಸೂರಿನಿಂದ ಕಾಂಗ್ರೆಸ್ ನ ಎಚ್ ವಿಶ್ವನಾಥ್ ನಾಮಪತ್ರ ಸಲ್ಲಿಸಿದರು. ದಾವಣಗೆರೆಯಲ್ಲಿ ಕಾಂಗ್ರೆಸ್ ನಿಂದ ಎಸ್ ಎಸ್ ಮಲ್ಲಿಕಾರ್ಜುನ, ಬಿಜೆಪಿಯಿಂದ ಸಂಸದ ಜಿಎಂ ಸಿದ್ದೇಶ್ ಕಣಕ್ಕಿಳಿದರು. ಹಾಸನದಲ್ಲಿ ದೇವೇಗೌಡರ ಪ್ರತಿಸ್ಪರ್ಧಿಯಾಗಿ ಬಿಜೆಪಿ ಕೆ ಎಚ್ ಹನುಮೇಗೌಡ ಹಾಗೂ ಕಾಂಗ್ರೆಸ್ ನಿಂದ ಬಿ ಶಿವರಾಂ ಅಖಾಡಕ್ಕಿಳಿದಿದ್ದಾರೆ.
ಬಾಗಲಕೋಟೆಯಲ್ಲಿ ಬಿಜೆಪಿ ಸಂಸದ ಪಿ ಸಿ ಗದ್ದೀಗೌಡ ಮರು ಆಯ್ಕೆ ಬಯಸಿ ಕಣಕ್ಕಿಳಿದರೆ, ಕಾಂಗ್ರೆಸ್ ನಿಂದ ಜಿ ಟಿ ಪಾಟೀಲ್ ನಾಮಪತ್ರ ಸಲ್ಲಿಸಿದ್ದಾರೆ. ಚಾಂಮರಾಜನಗರದಲ್ಲಿ ಎಚ್ ಡಿ ಕೋಟೆ ಶಿವಣ್ಣ ಜೆಡಿಎಸ್ ನಿಂದ ನಾಮಪತ್ರ ಸಲ್ಲಿಸಿದರೆ, ಕಾಂಗ್ರೆಸ್ ನಿಂದ ಧ್ರುವನಾರಾಯಣ ಮತ್ತು ಬಿಜೆಪಿಯಿಂದ ಆರ್ ಕೃಷ್ಣಮೂರ್ತಿ ಅಖಾಡಕ್ಕಿಳಿದಿದ್ದಾರೆ.
ಇದರೊಂದಿಗೆ ಎರಡನೇ ಹಂತದ ಚುನಾವಣೆಯೂ ರಂಗೇರತೊಡಗಿದ್ದು, ಕಣದಲ್ಲಿರುವ ಅತಿರಥ ಮಹಾರಥರು ಸೆಡ್ಡುಹೊಡೆಯಲಿದ್ದಾರೆ. ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಕಾರವಾರ ಸೇರಿದಂತೆ ಒಟ್ಟಾರೆ 11 ಕ್ಷೇತ್ರಗಳಲ್ಲಿ ಎರಡನೇ ಹಂತದ ಚುನಾವಣೆ ನಡೆಯಲಿದೆ.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications