ಬಿಎಂಎಸ್ ಕಾಲೇಜಿನ ವಿದ್ಯಾರ್ಥಿ ಬೆಂ.ದಕ್ಷಿಣದಿಂದ ಸ್ಪರ್ಧೆ

ರವಿಕುಮಾರ ಎಂಬಾತನೆ ಈ ಸಾಹಸಕ್ಕೆ ಕೈಹಾಕಿರುವ ವಿದ್ಯಾರ್ಥಿಯಾಗಿದ್ದಾನೆ. ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಯೊಬ್ಬ ವಿದ್ಯಾಭ್ಯಾಸದ ಹಂತದಲ್ಲಿ ಲೋಕಸಭೆ ಅಖಾಡಕ್ಕಿಳಿದರುವ ಪ್ರಥಮ ವಿದ್ಯಾರ್ಥಿಯಾಗಿದ್ದಾನೆ. ಕಾಲೇಜಿನ ಪ್ರಾಂಶುಪಾಲರು, ವಿಶ್ವವಿದ್ಯಾಲಯ ಕುಲಪತಿಗಳ ಅನುಮತಿ ಪಡೆದುಕೊಂಡಿರುವ ರವಿಕುಮಾರ ಸ್ಪರ್ಧಿಸಲು ನಿರ್ಧರಿಸಿದ್ದಾನೆ.
ಲೋಕಸಭೆ ಸ್ಪರ್ಧೆಗೆ ಇಳಿಯುವ ವಿಷಯ ಕೇಳಿದ ತಕ್ಷಣ ವಿಟಿಯುನ ಕುಲಪತಿಗಳು ಹಾಗೂ ಪ್ರಾಂಶಪಾಲರು ಅಶ್ಚರ್ಯ ವ್ಯಕ್ತಪಡಿಸಿದ್ದಾರೆ. ನಂತರ ಅನುಮತಿಯನ್ನೂ ನೀಡಿದ್ದಾರೆ. ಅಲ್ಲದೆ ಆತನ ಸ್ನೇಹಿತರು ರವಿಕುಮಾರ್ ಬೆಂಬಲಕ್ಕೆ ನಿಂತಿದ್ದು. ಕ್ಲಾಸ್ ಮುಗಿದ ಬಳಿಕ ಮತದಾರನ ಬಳಿ ತೆರಳುವುದಾಗಿ ತೀರ್ಮಾನ ಕೈಗೊಂಡಿದ್ದಾರೆ. ಬಿಎಂಟಿಸಿ ಬಸ್ ದಿನ ಪಾಸ್ ತೆಗೆದುಕೊಂಡು ಮತಯಾಚನೆ ತೆರಳುವುದಾಗಿ ಕಾರ್ಯಕ್ರಮವನ್ನು ಹಾಕಿಕೊಂಡಿದ್ದಾರೆ. ಈತನೊಂದಿಗೆ ಸ್ನೇಹಿತರು ತೆರಳಿ ಮತಯಾಚನೆ ಮಾಡಲಿದ್ದಾರೆ.
ಎಲ್ಲರೂ ಇಂಜಿನಿಯರ್ ಆಗ್ವೇಕು, ಡಾಕ್ಟರ್ ಆಗ್ಬೇಕು ಎಂದು ಆಸೆ ಪಡುವುದು ಸಹಜ. ಆದರೆ ಸಮಾಜದಲ್ಲಿರುವ ನೊರೆಂಟು ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡಲು ಯುವಕರಿಂದ ಮಾತ್ರ ಸಾಧ್ಯ. ಈ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ತೀರ್ಮಾನಿಸಿದೆ ಎಂದು ರವಿ ಹೇಳುತ್ತಾರೆ. ಅಲ್ಲದೆ ರಾಜಕೀಯ ನಮಗೆ ಸರಿ ಹೊಂದುವುದಿಲ್ಲ ಎಂಬ ಮನಸ್ಥಿತಿಯಿಂದ ಇಂದು ಅನೇಕ ಯುವಕರು ದೂರು ಸರಿಯುತ್ತಿರುವುದು ಸಾಮಾನ್ಯವಾಗಿದೆ. ಯುವಕರು ಮನಸ್ಥಿತಿ ಹೀಗೆ ಮುಂದುವರೆದರೆ ದಿನ ನಿತ್ಯ ಕಾಡುತ್ತಿರುವ ಬಗೆ ಹರಿಸುವವರು ಯಾರು ? ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಈ ವರೆಗಿನ ಯಾವ ಸರ್ಕಾರಗಳು ಇದರ ನಿವಾರಣೆಗೆ ಪ್ರಮಾಣಿಕ ಕ್ರಮವನ್ನು ಕೈಗೊಂಡಿಲ್ಲ. ಬರೀ ಆಶ್ವಾಸನೆಗಳು ಮಾತ್ರ ನೀಡಿದ್ದಾರೆ ಎಂದು ರವಿ ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯ ಅನಂತಕುಮಾರ್, ಕಾಂಗ್ರೆಸ್ ಕೃಷ್ಣ ಭೈರೇಗೌಡ, ಜೆಡಿಎಲ್ ನ ಪ್ರೊ. ರಾಧಾಕೃಷ್ಣ ಹಾಗೂ ಪಕ್ಷೇತರ ಅಭ್ಯರ್ಥಿ ಕ್ಯಾಪ್ಟನ್ ಗೋಪಿನಾಥ್ ಅವರ ವಿರುದ್ಧ ರವಿಕುಮಾರ್ ಸೆಣಸಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications