ಗಾಂಧಿನಗರದಲ್ಲಿ ಅಡ್ವಾಣಿ ನಾಮಪತ್ರ ಸಲ್ಲಿಕೆ

BJP's LK Advani files nomination
ಗಾಂಧಿನಗರ, ಏ. 8 : ಭಾರತೀಯ ಜನತಾ ಪಕ್ಷದ ಪ್ರಧಾನಮಂತ್ರಿ ಅಭ್ಯರ್ಥಿ ಲಾಲ್ ಕೃಷ್ಣ ಅಡ್ವಾಣಿ ಅವರು ಬುಧವಾರ ಗಾಂಧಿನಗರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಡ್ವಾಣಿ ಪತ್ನಿ, ಮಗಳು, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಅಪಾರ ಜನಸ್ತೋಮದ ನಡುವೆ ಇಂದು ಅಡ್ವಾಣಿ ನಾಮಪತ್ರ ಸಲ್ಲಿಸಿದರು.

ಆಯೋಧ್ಯೆಯ ದೊರೆ ಶ್ರೀರಾಮಚಂದ್ರ ರಾವಣನನ್ನು 12.39 ಕೊಂದು ಹಾಕಿದ್ದ. ಈ ಗಳಿಗೆಯಲ್ಲಿಯೇ ನಾಮಪತ್ರ ಸಲ್ಲಿಸಿ ಎಂದು ಜ್ಯೋತಿಷಿಗಳು ಹೇಳಿದ ಹಿನ್ನೆಲೆಯಲ್ಲಿ ಅಡ್ವಾಣಿ, ಸರಿಯಾಗಿ 12.39 ನಿಮಿಷಕ್ಕೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು. ಬಿಜೆಪಿಯಲ್ಲಿ ಉಕ್ಕಿನ ಮನುಷ್ಯ ಖ್ಯಾತಿಯಾಗಿರುವ ಅಡ್ವಾಣಿ ಅವರು ನಾಮಪತ್ರ ಸಲ್ಲಿಸಿಹೊರಬಂದ ನಂತರ ಅಪಾರ ಬೆಂಬಲಿಗರು ಅವರನ್ನು ಹಾಡಿಹರಿಸಿದರಲ್ಲದೆ, ಜಯಕಾರ ಮೊಳಗಿಸಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಸಭೆಯನ್ನುದ್ದೇಶಿಸಿ ಮಾತನಾಡಿದ ಅಡ್ವಾಣಿ, ಭಾರತವನ್ನು ಜಗತ್ತಿನಲ್ಲಿಯೇ ಮುಂಚೂಣಿಗೆ ತರಲು ಬಿಜೆಪಿ ಪಣತೊಟ್ಟಿದೆ. 21 ಶತಮಾನ ಭಾರತದ ಶತಮಾನವಾಗಬೇಕು ಎಂದು ಕನಸಿದೆ. ಈ ಕನಸನ್ನು ನನಸು ಮಾಡಲು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

(ದಟ್ಸ್ ಕನ್ನಡ ವಾರ್ತೆ)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+