Get Updates
Get notified of breaking news, exclusive insights, and must-see stories!

ಗೃಹ ಸಚಿವ ಚಿದಂಬರಂ ಮೇಲೆ ಶೂ ಎಸೆತ

Journalist throws shoe at Chidambaram
ನವದೆಹಲಿ, ಏ. 7 : ಇದೊಂದು ಶಾಕ್ ನೀಡುವಂಥ ಘಟನೆ. ಭಾರತದಲ್ಲಿ ಇಂತಹ ಘಟನೆ ನಿರೀಕ್ಷಿಸಲು ಅಸಾಧ್ಯವಾದರೂ ಇಂದು ಗೃಹ ಸಚಿವ ಚಿದಂಬರಂ ಅವರ ಮೇಲೆ ಪತ್ರಕರ್ತನೊಬ್ಬ ಬೂಟು ಎಸೆದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.

ಬಾಗ್ದಾದ್ ನಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಮೇಲೆ ಇರಾಕಿ ಪತ್ರಕರ್ತನೊಬ್ಬ ಬೂಟು ಎಸೆದ ತನ್ನ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಭಾರತದಲ್ಲಿ ಕೂಡ ಅಂತಹ ಘಟನೆ ಮಂಗಳವಾರ ನವದೆಹಲಿಯಲ್ಲಿ ನಡೆದಿದೆ. ಸಿಖ್ ಹತ್ಯಾಕಾಂಡದಲ್ಲಿ ಯುಪಿಎ ಸರ್ಕಾರ ನಡೆದುಕೊಂಡ ಕ್ರಮ ಖಂಡಿಸಿ ಜರ್ನೈಲ್ ಸಿಂಗ್ ಎಂಬ ಪತ್ರಕರ್ತ ಕೇಂದ್ರದ ಗೃಹ ಸಚಿವ ಪಿ ಚಿದಂಬರಂ ಮೇಲೆ ಬೂಟು ಎಸೆದಿದ್ದಾರೆ.

1984ರಲ್ಲಿ ಸಿಖ್ ಹತ್ಯಾಕಾಂಡಕ್ಕೆ ಸಂಬಂಧಿದಂತೆ ಗೃಹ ಸಚಿವ ಚಿದಂಬರಂ ಸ್ಪಷ್ಟ ಉತ್ತರ ಹೇಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ದೈನಿಕ್ ಜಾಗರಣ್ ಪತ್ರಿಕೆಯ ಪತ್ರಕರ್ತ ಜರ್ನೈಲ್ ಸಿಂಗ್ ಅವರ ಮೇಲೆ ಬೂಟು ಎಸೆದಿದ್ದಾನೆ. ಜರ್ನೈಲ್ ಸಿಂಗ್ ನನ್ನು ಪೊಲೀಸ್ ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ಆರಂಭಿಸಿದ್ದಾರೆ. ಇಂದಿರಾ ಗಾಂಧಿ ಹತ್ಯೆ ನಂತರ ಸುಮಾರು 3500 ಸಿಖ್ ಮಾರಣಹೋಮ ನಡೆದಿತ್ತು. ಕಾಂಗ್ರೆಸ್ ನಾಯಕ ಜಗದೀಶ ಟೈಟ್ಲರ್ ಈ ಹತ್ಯಾಕಾಂಡಕ್ಕೆ ಪ್ರಮುಖ ಕಾರಣಕರ್ತ ಎಂಬ ಆರೋಪವನ್ನು ಎದುರಿಸುತ್ತಿದ್ದರು. ಆದರೆ, ಇತ್ತೀಚೆಗೆ ಸಿಬಿಐ ಪೊಲೀಸರು ಟೈಟ್ಲರ್ ಗೆ ಕ್ಲಿನ್ ಚಿಟ್ ನೀಡಿದ್ದರು.

(ದಟ್ಸ್ ಕನ್ನಡ ವಾರ್ತೆ)

ಪೂರಕ ವಿಡಿಯೊ: ಬುಷ್ ಚಪ್ಪಲಿ ಸೇವೆ ವೀಕ್ಷಣೆಗೆ ಜನಜಾತ್ರೆ

ಪೂರಕ ಓದಿಗೆ: ಬೂಟು ಎಸೆದವನಿಗೆ 3 ವರ್ಷ ಜೈಲು ಶಿಕ್ಷೆ
ಚಪ್ಪಲಿ ತಪ್ಪಿಸಿಕೊಂಡ ಜಾರ್ಜ್ ಬುಷ್

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+