ನನಗೂ ಸಿಎಂ ಆಗುವ ಆಸೆಯಿದೆ, ಖರ್ಗೆ

ಯಡಿಯೂರಪ್ಪ ಜಿಲ್ಲೆಯ ನಾನಾ ಕಡೆ ಭಾನುವಾರ ಭಾಷಣ ಮಾಡಿ ಖರ್ಗೆ ಮುಖ್ಯಮಂತ್ರಿ ಆಗ್ತಾರಂತೆ, ಹೀಗಾಗಿ ಅವರು ದಿಲ್ಲಿಗೆ ಹೋಗುವ ಬದಲು ಇಲ್ಲೇ ಇರುವ ವ್ಯವಸ್ಥೆ ಮಾಡಿ ಎಂದು ಮತದಾರರಿಗೆ ಹೇಳಿದ್ದರಿಂದ ಆಕ್ರೋಶಗೊಂಡ ಖರ್ಗೆ, ಸೋಮವಾರ ಕ್ಷೇತ್ರದಲ್ಲಿ ನಡೆದ ಪಕ್ಷದ ಚುನಾವಣ ಪ್ರಚಾರ ಸಭೆಯಲ್ಲಿ ಸಿಎಂ ವಿರುದ್ದ ವಾಗ್ದಾಳಿ ನಡೆಸಿದರು.
ಸಚಿವ ಬೆಳಮಗಿಯನ್ನು ಸಂಸತ್ ಗೆ ಕಳುಹಿಸಿ ಅವರ ಹುದ್ದೆಯನ್ನು ತಾವು ಪಡೆದುಕೊಳ್ಳಲು ಶಶಿಲ್ ನಮೋಶಿ ಹಾಗೂ ಇತರ ಮುಖಂಡರು ಕುತಂತ್ರ ಮಾಡಿದ್ದಾರೆ. ಒಳ್ಳೆಯ ಜನರು ಸಂಸತ್ತಿಗೆ ಹೋಗುವುದು ಮುಖ್ಯಮಂತ್ರಿಗಳಿಗೆ ಇಷ್ಟವಿಲ್ಲ ಎಂದು ಖರ್ಗೆ ಕಿಡಿಕಾರಿದರು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು











Click it and Unblock the Notifications